News Karnataka Kannada
Monday, April 29 2024
ಮೈಸೂರು

ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ : ನೂತನ ಮೇಯರ್ ಸುನಂದಾ ಪಾಲನೇತ್ರ

Sunanda Phalanetra
Photo Credit :

ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ : ನೂತನ ಮೇಯರ್ ಸುನಂದಾ ಪಾಲನೇತ್ರ

ಮೈಸೂರು, ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಅಧಿಕಾರ ಲಭಿಸಿದ್ದು ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಮೇಯರ್ ಸುನಂದಾ ಪಾಲನೇತ್ರ ತಿಳಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮೊದಲ ಬಾರಿಗೆ ಮೇಯರ್ ಆಗಿರುವುದು, ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಸ್ಥಾನ ಲಭಿಸಿರುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ಪಕ್ಷದ ಹಿರಿಯರಿಗೆ , ಬಿಜೆಪಿಯ ಎಲ್ಲ ನಾಯಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನೆದುರು, ನನ್ನ ಹಿಂದೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ನಾಳೆ ಭೇಟಿಯಾಗುತ್ತೇನೆ ಎಂದರು.
ಹತ್ತು ನಿಮಿಷದ ಹಿಂದೆ ಎಲ್ಲರೂ ಅಭಿನಂದನೆ ತಿಳಿಸಿದ್ದರು. ನಂತರ ಅವರೆಲ್ಲ ಗದ್ದಲ ಮಾಡಿ ಹೊರಗೆ ಬಂದಿರುವುದು ತುಂಬಾ ಬೇಸರ ಆಯಿತು. ಮನಸ್ಸಿಗೆ ನೋವಾಯಿತು. ನಾವು 65ಮಂದಿಯೂ ಒಂದೇ ಎಂದು ತಿಳಿದುಕೊಂಡಿದ್ವಿ, ಅವರು ಬೈ ಕಾಟ್ ಮಾಡಿದ್ದು ಇಷ್ಟ ಆಗಿಲ್ಲ. ಪರವಾಗಿಲ್ಲ ಬಿಡಿ ಎಂದು ನೊಂದು ನುಡಿದರು. ನಾನು ಕೇಳೋದಿಷ್ಟೇ. ಇಬ್ಬರೂ ಸಹಕಾರ ಕೊಡಿ ಮೈಸೂರಿನ ಹಿತಾಸಕ್ತಿ ಇಟ್ಟು ಕೆಲಸ ಮಾಡೋಣ, ಗೊಂದಲಗಳು ಬೇಡ, ನಾವೆಲ್ಲರೂ ಒಟ್ಟಿಗೆ ಇದ್ದರೆ ತಾನೆ ನಾಳೆ ಮೈಸೂರಿನ ಜನತೆಗಾಗಿ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂದರಲ್ಲದೇ, ಮೈಸೂರಿನ ಜನತೆಗೆ ಹೃದಯತುಂಬಿದ ಧನ್ಯವಾದಗಳನ್ನು ಹೇಳುತ್ತೇನೆ ಎಂದರು. ಇದೇ ವೇಳೆ ಮೈಸೂರಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು