ಬೆಂಗಳೂರು: ದಕ್ಷಿಣ (ಕೆಂಗೇರಿ) ತಾಲೂಕು ವ್ಯಾಪ್ತಿಯಲ್ಲಿ ಬರುವ ಮಠ, ಮದರಸ, ಚರ್ಚ್ಗಳು ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುದಕ್ಕೆ ಇದೀಗ ಸರಕಾರ ಶಾಕಿಂಗ್ ನೋಟಿಸ್ ಕೊಟ್ಟಿದೆ. ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್, ಮಠ, ಎನ್ಜಿಓಗಳಿಗೂ ನೋಂದಣಿಗೆ ದಿನಾಂಕವನ್ನು ಜಾರಿಗೊಳಿಸಿದೆ.
ಒಂದು ವೇಳೆ ನೋಂದಣಿಯಾಗದೇ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್ ಮಠ, ಎನ್ಜಿಓಗಳಿಗೂ ಬೀಗ ಬೀಳಲಿದೆ ಎಂದು ಸರಕಾರ ಎಚ್ಚರಿಕೆಯನ್ನು ನೀಡಿದೆ. ಮದರಸ ಹಾಗೂ ಚರ್ಚ್ಗಳಲ್ಲಿ ಮಕ್ಕಳನ್ನ ದಾಖಲಿಸಿ. ಪಾಲನ ಸಂಸ್ಥೆಗಳನ್ನ ಸರ್ಕಾರದ ನೋಂದಣಿ ಇಲ್ಲದೆ ನಡೆಸುತ್ತಿದ್ದರೆ, ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ 2015 ಕಲಂ 41ರ ಅನ್ವಯ ಕಡ್ಡಾಯವಾಗಿ ಏಪ್ರಿಲ್ 20ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.