ಚಿತ್ರದುರ್ಗ : ಕೊರೋನಾ ನಂತ್ರ ಉಂಟಾದಂತ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಜನರು ಒದ್ದಾಡುತ್ತಿದ್ದಾರೆ. ಭಾರಿ ಮಳೆಯಿಂದ ಉಂಟಾದಂತ ಹಾನಿಯಿಂದಾಗಿ ರೈತರು ಬೆಳೆದಂತ ಬೆಳೆ ಕೈಗೆ ಸಿಗದೇ ತೊಂದರೆಗೆ ಸಿಲುಕಿದ್ದಾರೆ. ಇಂತಹ ಸಂಕಷ್ಟದಲ್ಲಿರುವಂತ ಜನರ ಬೆಂಬಲಕ್ಕೆ ನಿಲ್ಲಬೇಕಾದಂತ ಸರ್ಕಾರ, ಅನರ್ಹತೆಯ ಆಧಾರದ ಮೇಲೆ ಇದೀಗ 18 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದೆ.
ಹೌದು.. ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 18 ಸಾವಿರ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಪಡಿಸಲಾಗಿದೆ. ಹೀಗೆ ರದ್ದು ಪಡಿಸಲಾಗಿರುವಂತ ಬಿಪಿಎಲ್ ಕಾರ್ಡ್ ಗಳಲ್ಲಿ 15 ಸಾವಿರ ರೈತರ ಕಾರ್ಡ್ ಗಳಾಗಿವೆ ಎಂಬುದಾಗಿ ತಿಳಿದು ಬಂದಿದೆ.
ಸರ್ಕಾರವು ವಿವಿಧ ಮಾನದಂಡಗಳ ಅನುಸಾರವಾಗಿ ಆಧಾರ್ ಕಾರ್ಡ್ ಆಧಾರದ ಮೇಲೆ ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗಿದೆ. ಬಡವರು, ರೈತರನ್ನು ಶ್ರೀಮಂತರ ಪಟ್ಟಿಗೆ ಸೇರಿಸಿರುವಂತ ಸರ್ಕಾರದ ಮಾನದಂಡಗಳು, ಈಗ ಜಿಲ್ಲೆಯೊಂದರಲ್ಲೇ 18 ಸಾವಿರ ಬಿಪಿಎಲ್ ಕಾರ್ಡ್ ದಾರರು ಅನರ್ಹರು ಎಂಬುದಾಗಿ ರದ್ದು ಪಡಿಸುವಂತೆ ಆಗಿದೆ.