News Karnataka Kannada
Thursday, May 02 2024
ದೇಶ

ರೈತರ ಪ್ರತಿಭಟನೆ ಎಫೆಕ್ಟ್‌ ; 73 ರೈಲು ಸಂಚಾರ ಬಂದ್

Railway Delhi 17 6 21 Dt 176216 1 Newsk 9508623154
Photo Credit :

 

ನವದೆಹಲಿ ; ದೇಶದ ವಿವಿಧ ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ 27 ಹೆಚ್ಚು ರೈಲು ಸೇವೆಯನ್ನು ಬಂದ್ ಮಾಡಿದೆ. ಇದರ ಜೊತೆಗೆ ಹಲವು ರೈಲುಗಳ ಮಾರ್ಗಗಳ ಸಂಚಾರವನ್ನು ಬೇರೆ ಕಡೆ ತಿರುಗಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ಪಂಜಾಬ್‌ನ ಜಲಂಧರ್‌ನಲ್ಲಿ, ಕಬ್ಬಿನ ಬೆಲೆಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ರೈತರ ಪ್ರತಿಭಟನೆ ನಡೆಸುತ್ತಿದ್ದಾರೆ. ಸತತ ಐದನೇ ದಿನವಾದ ಮಂಗಳವಾರವೂ ರೈಲು ಹಳಿಗಳನ್ನ ನಿರ್ಬಂಧಿಸಲಾಗಿದೆ.ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.ಫಿರೋಜಪುರ ವಿಭಾಗದ ರೈಲ್ವೇ ಅಧಿಕಾರಿಗಳ ಪ್ರಕಾರ, 27 ರೈಲುಗಳನ್ನ ಇಲಾಖೆಯು ರದ್ದುಗೊಳಿಸಿದ್ದು, 36 ರೈಲುಗಳ ಮಾರ್ಗವನ್ನ ತಿರುಗಿಸಲಾಗಿದೆ. ಇದಲ್ಲದೇ, ಕೆಲವು ರೈಲುಗಳನ್ನು ಸಹ ಅಲ್ಪಾವಧಿಗೆ ನಿಲ್ಲಿಸಲಾಗಿದೆ.
ರದ್ದಾದ ರೈಲುಗಳ ಪಟ್ಟಿಯಲ್ಲಿ ನವದೆಹಲಿ ಮತ್ತು ಅಮೃತಸರ ನಡುವೆ ಓಡುವ ಶತಾಬ್ದಿ ಎಕ್ಸ್‌ಪ್ರೆಸ್, ಅಮೃತಸರ-ಹರಿದ್ವಾರ ಜನ ಶತಾಬ್ದಿ ಎಕ್ಸ್‌ಪ್ರೆಸ್, ಶಾನ್-ಇ-ಪಂಜಾಬ್ ಎಕ್ಸ್‌ಪ್ರೆಸ್, ದೆಹಲಿ-ಪಠಾಣ್‌ಕೋಟ್ ಎಕ್ಸ್‌ಪ್ರೆಸ್ ಮತ್ತು ಜಮ್ಮು ತಾವಿ-ಸರೈ ರೋಹಿಲ್ಲಾ ಎಕ್ಸ್‌ಪ್ರೆಸ್‌ಗಳು ಸೇರಿವೆ.ಈ ಯಾವುದೇ ರೈಲುಗಳಲ್ಲಿ ಮೀಸಲಾತಿ ಮಾಡುವ ಮೊದಲು, ರದ್ದಾದ ರೈಲುಗಳ ಈ ಮಾರ್ಗಗಳ ಪ್ರಯಾಣಿಕರು ಪರದಾಡುವಂತಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು