ಚಿತ್ರದುರ್ಗ ; ಜಿಲ್ಲಾಡಾಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ
ಇಲಾಖೆ ಇವರುಗಳು ಸಂಯುಕ್ತಾಶ್ರಯದಲ್ಲಿ ಕಾರ್ಮಿಕರ ಅದಾಲತ್ ಅಂಗವಾಗಿ ಕಟ್ಟಡ ಮತ್ತು
ಇತರೆ ನಿರ್ಮಾಣ ಕಾರ್ಮಿಕರಿಗೆ ಸಂಬಂಧಿಸಿದಂತೆ ಕ್ಲೇಂ ಅರ್ಜಿಗಳ ಕುರಿತ ಆಟೋ
ಪ್ರಚಾರಕ್ಕೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ
ಇ.ಬಾಲಕೃಷ್ಣ ಅವರು ಹಸಿರು ನಿಶಾನೆ ತೋರಿಸುವ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಮೈತ್ರಿ ಸಿ ಸ್ವಾಮಿ, ಕಾರ್ಮಿಕ
ಆದಾಲತ್ ಅಂಗವಾಗಿ ಆಟೋ ಪ್ರಚಾರ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಗ್ರಾಮ
ಪಂಚಾಯಿತಿಗಳಿಗೆ ಭೇಟಿ ನೀಡಿ ಪ್ರಚಾರ ಕೈಗೊಂಡು ಕಾರ್ಮಿಕ ಅದಾಲತ್ಗೆ ಸಂಬಂಧಿಸಿದಂತೆವ
ಗ್ರಾಮ ಪಂಚಾಯಿತಿ ಕಚೇರಿಗೆ ಕಾರ್ಮಿಕ ಅದಾಲತ್ನ ಸ್ಟಿಕರ್ ಅಂಟಿಸುವ ಮೂಲಕ ಪ್ರಚಾರ
ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶೈಕ್ಷಣಿಕ ಧನ ಸಹಾಯ ಸೌಲಭ್ಯ, ಮದುವೆ ಧನ
ಸಹಾಯ ಸೌಲಭ್ಯ, ವೈದ್ಯಕೀಯ ಧನ ಸಹಾಯ ಸೌಲಭ್ಯ, ಅಪಘಾತ ಪರಿಹಾರ ಸೌಲಭ್ಯ, ಕೋವಿಡ್-19ರ
ಎರಡನೇ ಅಲೆಯಲ್ಲಿ ರೂ.3000/- ಪರಿಹಾರ ಸಹಾಯಧನಗಳ ಕುರಿತು, ಪಿಂಚಣಿ ಸೌಲಭ್ಯ, ಹೆರಿಗೆ
ಧನಸಹಾಯ ಸೌಲಭ್ಯ, ಅಂತ್ಯಸಂಸ್ಕಾರ ಹಾಗೂ ಅನುಗ್ರಹ ರಾಶಿ ವೆಚ್ಚ ಸೌಲಭ್ಯ, ಪ್ರಮುಖ
ವೈದ್ಯಕೀಯ ವೆಚ್ಚ ಸಹಾಯಧನ ಸೌಲಭ್ಯ, ತಾಯಿ ಮಗು ಹಸ್ತ, ದುರ್ಲಬತೆ ಪಿಂಚಣಿ ಸೌಲಭ್ಯ,
ಕುಟುಂಬ ಪಿಂಚಣಿ ಸೌಲಭ್ಯ ಸೇರಿದಂತೆ ಇತರೆ ಕ್ಲೇಂಗಳಿಗೆ ಸಂಬಂಧಿಸಿದಂತೆ ಆಗಸ್ಟ್
16ರಿಂದ ಸೆಪ್ಟೆಂಬರ್ 16 ರವರಗೆ ಕಾರ್ಮಿಕ ಅದಾಲತ್ ಹಮ್ಮಿಕೊಂಡಿದ್ದು, ವಿವಿಧ ಕ್ಲೇಂ
ವಿಲೇವಾರಿಗಾಗಿ ಅರ್ಜಿದಾರರು ಕೂಡಲೇ ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಎಲ್ಲಾ
ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ ಕ್ಲೈಂ ಅರ್ಜಿಗಳ ವಿಲೇವಾರಿಗೆ
ಸಹಕರಿಸಬೇಕು ಎಂದು ಹೇಳಿದರು.
ಕಾರ್ಮಿಕ ಅದಾಲತ್: ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಎಡಿಸಿ ಇ. ಬಾಲಕೃಷ್ಣ ಚಾಲನೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.