ಬೆಂಗಳೂರು ; ಸರ್ಕಾರಿ ವೈದ್ಯರೊಬ್ಬರನ್ನು ಬೆದರಿಸಿ ರೋಲ್ಕಾಲ್ಗೆ ಯತ್ನಿಸಿದ ಸಂಘಟನೆಯೊಂದರ ಅಧ್ಯಕ್ಷನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪ್ರದೀಪ್ ಬಂಧಿತ ಆರೋಪಿ. ಈತ ನಗರದ ಜಿಲ್ಲಾ ಸರ್ಜನ್ ಅನ್ವರ್ ಅಹಮ್ಮದ್ ಎಂಬುವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅಲ್ಲದೆ ಅವರನ್ನು ಬೇರೆ ಕಡೆ ಎತ್ತಂಗಡಿ ಮಾಡಿಸುವುದಾಗಿಯೂ ಸಹ ಬೆದರಿಸಿದ್ದ. ಈ ಬಗ್ಗೆ ಡಾ.ಅನ್ವರ್ ಅಹಮ್ಮದ್ ಅವರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಸರ್ಕಾರೀ ವೈದ್ಯರಿಗೇ ಬ್ಲಾಕ್ ಮೇಲ್ ಮಾಡಿದ ಸಂಘಟನೆ ಅದ್ಯಕ್ಷ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.