News Karnataka Kannada
Wednesday, May 08 2024
ಬೆಂಗಳೂರು ನಗರ

ಸುಸೈಡ್‌ ನೋಟ್‌ ಬರೆದು ನಾಪತ್ತೆ ಆದ ಕುಟುಂಬ

Murder Girl 16082021
Photo Credit :

ಬೆಂಗಳೂರು ;ಕೋವಿಡ್​ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆ ಬಲು ಕಷ್ಟವಾಗಿದೆ. ಇದರ ಜೊತೆ ಅವಮಾನಗಳು ಇನ್ನಷ್ಟು ಬರೆ ಎಳೆದಿದ್ದು, ಬದುಕಲು ಆಗದು ಎಂದು ಕುಟುಂಬವೊಂದು ಸೂಸೈಡ್​ ನೋಟ್​ ಬರೆದು ನಾಪತ್ತೆಯಾಗಿರುವ ಪ್ರಕರಣ ಬಾಗಲಗುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬದ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಗಾಂಧಿ ಎಂಬ 43 ವರ್ಷದ ವ್ಯಕ್ತಿ ಟಿ ದಾಸರಹಳ್ಳಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಹೆಂಡತಿ ಶಾಲಿನಿ ಕಂಪ್ಯೂಟರ್​ ಆಪರೇಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ, ಕೋವಿಡ್​ನಿಂದ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಸಾಲದ ಹೊರೆ ಹೆಚ್ಚಿತ್ತು. ನಿತ್ಯ ಸಾಲಗಾರರು ಮನೆ ಮುಂದೆ ಬಂದು ಒತ್ತಡ ಹೇರಲು ಶುರು ಮಾಡಿದರು. ಏಕಾಏಕಿ ಏಳು ಲಕ್ಷ ಹಣ ತರುವುದು ದುಸ್ತರವಾಗಿತ್ತು. ಈ ಎಲ್ಲಾ ಕಾರಣದಿಂದ ಬೆಸತ್ತ ಕುಟುಂಬ ಮನೆಯಲ್ಲಿ ಸೂಸೈಡ್​ ನೋಟ್​ ಬರೆದುಟ್ಟು ನಾಪತ್ತೆಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು