ಹಾವೇರಿ : ಇದುವರೆಗೆ ತಂದೆ-ತಾಯಿಗಳನ್ನು ಮಕ್ಕಳು ಆಸ್ತಿಗಾಗಿ ಹಿಂಸೆಗೊಳಿಸೋದನ್ನು ಕಂಡಿದ್ದೀರಿ. ಅಲ್ಲಲ್ಲಿ ಆ ರೀತಿಯ ಪ್ರಕರಣಗಳು ನಡೆಯೋದನ್ನು ಕೇಳಿದ್ದೀರಿ. ಇದಕ್ಕೆ ತದ್ವಿರವೆನ್ನುವಂತೆ ರಾಜ್ಯದಲ್ಲೊಂದು ಭೀಕರ ನೀಚ ಕೃತ್ಯವೊಂದು ನಡೆದಿದೆ. ಆಸ್ತಿಯ ಆಸೆಗಾಗಿ ಸಂಬಂಧಿಕರೊಬ್ಬರು 98 ವರ್ಷದ ಅಜ್ಜಿಯನ್ನೇ ಹೊತ್ತೊಯ್ದಿರೋ ಘಟನೆ ಹಾವೇರಿಯ ಹಾನಗಲ್ ನಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿಯೇ ರಾಜ್ಯದಲ್ಲೇ ಬೆಚ್ಚಿ ಬೀಳುವಂತ ನೀಚ ಕೃತ್ಯವೊಂದು ನಡೆದಿರೋದು. 38 ಗುಂಟೆ ಆಸ್ತಿಯ ಆಸೆಗಾಗಿ 98 ವರ್ಷದ ಅಜ್ಜಿಯನ್ನು, ಅಜ್ಜಿಯ ಪತಿಯ ಸಹೋದರನ ಮಕ್ಕಳು ಹೆಗಲ ಮೇಲೆ ಹೊತ್ತುಕೊಂಡು ಹೋಗಿರೋ ಘಟನೆ ನಡೆದಿದೆ.
ಅಂದಹಾಗೇ ಕಳೆದ 30 ವರ್ಷಗಳಿಂದ ಅರ್ಜಿಯನ್ನು ಮಾಣಿಕಪ್ಪ ದುಂಡಣ್ಣನವರ ಮನೆಯಲ್ಲಿ ಇರಿಸಿಕೊಂಡು ನೋಡಿಕೊಳ್ಳುತ್ತಿದ್ದರು. ಮಾಣಿಕಪ್ಪ ದುಂಡಣ್ಣ ತನ್ಮನ್ನ ಚೆನ್ನಾಗಿ ನೋಡಿಕೊಂಡ ಕಾರಣ ತನ್ನ ಹೆಸರಿನಲ್ಲಿದ್ದಂತ 36 ಗುಂಟೆ ಆಸ್ತಿಯನ್ನು ಅವರಿಗೆ ಅರ್ಜಿ ಮಾಡಿಕೊಟ್ಟಿದ್ದರು.
ಇದರಿಂದ ಸಿಟ್ಟಾದಂತ ಸಂತೋಷ ದುಂಡಣ್ಣನವರ, ಈರಪ್ಪ ದುಂಡಣ್ಣನವರ, ಆದಪ್ಪ ದುಂಡಣ್ಣನವರ, ಸಾವಿತ್ರಾ ದುಂಡಣ್ಣನವರ, ದ್ರಾಕ್ಷಾಯಿಣಿ ದುಂಡಣ್ಣವರ, ಪ್ರಕಾಶ್ ದುಂಡಣ್ಣನವರ ಹಾಗೂ ಮಂಜಪ್ಪ ದುಂಡಣ್ಣವರ ಸೇರಿಕೊಂಡು, ಮಾಣಿಕಪ್ಪ ದುಂಡಣ್ಣ ಮನೆಗೆ ನುಗ್ಗಿ ಅಜ್ಜಿಯನ್ನು ಹೊತ್ತೊಯ್ದಿದ್ದಾರೆ. ಈ ಸಂಬಂಧ ಇದೀಗ ಐವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.