ಕುಂದಗೋಳ : ತಾಲೂಕಿನ ಹಲವೆಡೆ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಕುಂದಗೋಳ ಹಾಗೂ ಗುಡೇನಕಟ್ಟಿ ಮಾರ್ಗ ಮಧ್ಯದ ನರ್ತೇನ ಹಳ್ಳ ಪ್ರವಾಹ ಭೀತಿ ಸೃಷ್ಟಿಸಿದೆ. ಸಂಚಾರಕ್ಕೆ ಅಸ್ತವ್ಯಸ್ತ ಉಂಟಾಗಿದೆ.
ಮಳೆಗೆ ನರ್ತೇನಹಳ್ಳ ಉಕ್ಕಿ ಹರಿದಿದ್ದು, ಬಸ್ ಹಾಗೂ ಇತರೆ ವಾಹನಗಳು ಕೆಲ ಕಾಲ ರಸ್ತೆಯ ಒಂದೆಡೇ ನಿಂತರೇ ಬೈಕ್ ಸವಾರರು ಹಳ್ಳದ ಪ್ರವಾಹದ ಮಧ್ಯೆಯೇ ದಾಟುವ ಸಾಹಸ ಮಾಡಿ ಅದೃಷ್ಟವಶಾತ್ ದಡ ಸೇರಿದ್ದಾರೆ.