ಉಡುಪಿ: ಬುಡೋಕಾನ್ ಸ್ಪೋರ್ಟ್ಸ್ ಕರಾಟೆ-ಡೋ ಅಸೋಸಿಯೆಶನ್ ಆಫ್ ಇಂಡಿಯಾ ವತಿಯಿಂದ ರಾಷ್ಟ್ರೀಯ ಮಟ್ಟದ ಆಹ್ವಾನಿತರ ಓಪನ್ ಚಾಂಪಿಯನ್ ಲೀಗ್ ಬ್ಲಾಸ್ಟ್-ಸೀಸನ್ 2 ರ ಉದ್ಘಾಟನೆ ಮಣಿಪಾಲದ ಆರ್ಎಸ್ಬಿ ಸಭಾಭವನದಲ್ಲಿ ಇಂದು ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿಹಾನ್ ಶಿವಮೊಗ್ಗ ವಿನೋದ್ ಅವರು, ಕರಾಟೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆ ಇದ್ದು, ಇದು ಹೆಚ್ಚಳವಾಗಬೇಕು. ರಾಜ್ಯದಲ್ಲಿ 100 ಕರಾಟೆ ಮಾಸ್ಟರ್ಗಳಲ್ಲಿ 30ರಷ್ಟು ಮಂದಿ ಮಾತ್ರ ಕರಾವಳಿ ಭಾಗದವರಿದ್ದಾರೆ. ಹಾಗೆ ಮಕ್ಕಳ ಸಂಖ್ಯೆೆ ಕೂಡ ಶೇ.30 ರಷ್ಟು ಇದೆ. ಇದನ್ನು ಹೆಚ್ಚಳ ಮಾಡಲು ಗಮನಹರಿಸಬೇಕು ಎಂದರು.
ಕರಾಟೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನದೀಮ್ ಮೂಡುಬಿದಿರೆ ಉದ್ಘಾಟಿಸಿ ಶುಭ ಹಾರೈಸಿದರು. ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಕರಾಟೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್ ಕುಂದಾಪುರ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ. ಲೀಲಾಧರ್ ಶೆಟ್ಟಿ, ಅಧ್ಯಕ್ಷ ಪ್ರಸನ್ನ ಶೆಟ್ಟಿ ಬೈಲೂರು, ಉಪಾಧ್ಯಕ್ಷ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಪಾಧ್ಯಕ್ಷ ಶರತ್ ಉಚ್ಚಿಲ, ಪ್ರಮುಖರಾದ ಶರತ್ ಮಂಗಳೂರು, ಸತೀಶ್ ಬೆಳ್ಮಣ್ಣು, ರೋಹಿತಾಕ್ಷ ಉದ್ಯಾವರ, ವಾಮನ ಪಾಲನ್, ಶ್ರೀಧರ, ಕೃಷ್ಣ ಜೆ.ಕೋಟ್ಯಾನ್, ಪ್ರವೀಣಾ ಸುವರ್ಣ, ಸುರೇಶ್ ಆಚಾರ್ಯ, ದಯಾನಂದ ಉಪಸ್ಥಿತರಿದ್ದರು.
ರವಿ ಕೋಟ್ಯಾನ್ ಸ್ವಾಗತಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ ರಘುರಾಜ ಪಣಿಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘಾ ಅಂಬಲಪಾಡಿ ವಂದಿಸಿದರು. ವಿನೋದ್ ಮಂಚಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಕರಾಟೆ ಪಟು, ಮಾರ್ಗದರ್ಶಕ ದಿ. ನಿತ್ಯಾನಂದ ಕೆಮ್ಮಣ್ಣು ಅವರ ಸ್ಮರಣಾರ್ಥ ಅವರ ಭಾವಚಿತ್ರಕ್ಕೆೆ ಪುಷ್ಪಾರ್ಚನೆ ಸಲ್ಲಿಸಲಾಯಿತು.