ಅಣ್ಣಿಗೇರಿ: ಮಳೆಯಿಲ್ಲದೆ ರೈತರು ಕಂಗಾಲು ಆಗಿದ್ದಾರೆ. ಇದರಿಂದಾಗಿ ಕೃಪೆ ತೋರುವಂತೆ ಮಳೆರಾಯನಿಗೆ ಪೂಜೆ ಸಲ್ಲಿಸುವ ನಿಟ್ಟಿನಲ್ಲಿ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಹಸಬಿಯವರ ಓಣಿಯ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಗೊಂಬೆ ಮದುವೆ ಮಾಡಿದರು.
ಗ್ರಾಮದ ಪ್ರಮುಖ ಬೀದಿಯಲ್ಲಿ ಗೊಂಬೆಗಳನ್ನು ಕರಡಿ ಮಜಲು ವಾದ್ಯನಾದದೊಂದಿಗೆ ಮೆರವಣಿಗೆ ಮೂಲಕ ಮೌನೇಶ್ವರ ದೇವಸ್ಥಾನಕ್ಕೆ ತರಲಾಯಿತು. ಬಳಿಕ ಅರಿಶಿಣ ಶಾಸ್ತ್ರಸೇರಿದಂತೆ ವಿವಿಧ ಶಾಸ್ತ್ರಗಳೊಂದಿಗೆ ಗೊಂಬೆಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮದ ಗುರು ಹಿರಿಯರು, ಮಹಿಳೆಯರು ಭಾಗವಹಿಸಿದ್ದರು.