ಹುಬ್ಬಳ್ಳಿ: ನಗರದ ಬೆಳ್ಳಂಬೆಳಗ್ಗೆ ವರುಣನ ಆಗಮನವಾಗಿದ್ದು, ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಆಗಮಿಸಿದ ಜನ ಮಳೆಯಲ್ಲಿಯೇ ಓಡಾಡುವಂತಾಗಿದೆ. ಈಗಾಗಲೇ ಮೋಡ ಮುಸುಕಿನ ವಾತಾವರಣದಿಂದ ಜನ ಆತಂಕಗೊಂಡಿದ್ದಾರೆ.
ಇನ್ನೂ ಮುಂಗಾರು ಆರಂಭವಾಗಿದ್ದು, ಬೆಳಗ್ಗೆಯಿಂದಲೇ ಆರಂಭಗೊಂಡಿರುವ ಮಳೆಯಿಂದ ಜನ ಸಂಚಾರಕ್ಕೆ ಅಡೆತಡೆ ಆಗಿದ್ದು, ಜನರು ಕೊಡೆ ಹಾಗೂ ಪ್ಲಾಸ್ಟಿಕ್ ಚೀಲದ ಮೊರೆ ಹೋಗಿದ್ದಾರೆ.