ಕುಂದಗೋಳ: ಕಳೆದ 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಪುನಃ ತಮ್ಮೂರು ಕುಂದಗೋಳ ತಾಲೂಕಿನ ಬೇಟದೂರು ಗ್ರಾಮಕ್ಕೆ ಆಗಮಿಸಿದ ಯೋಧ ಲಾಯನ್ಸ್ ನಾಯಕ ರವಿ ಈರಪ್ಪ ಕಮ್ಮಾರ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ.
ರವಿ ಕಮ್ಮಾರ ಅವರು ತಮ್ಮ 17 ವಯಸ್ಸಿಗೆ ಭಾರತೀಯ ಸೇನೆಗೆ ಸೇರಿ 20 ವರ್ಷಗಳಿಂದ ದೇಶ ಕಾಲ ಸೇವೆ ಸಲ್ಲಿಸಿ, ಇದೀಗ ಪುನಃ ಗ್ರಾಮಕ್ಕೆ ಆಗಮಿಸಿದ ಸೈನಿಕನನ್ನು ಗ್ರಾಮಸ್ಥರು ಗ್ರಾಮದ ತುಂಬೆಲ್ಲ ಅದ್ದೂರಿ ಮೆರವಣಿಗೆ ಮುಖಾಂತರ ಸ್ವಾಗತಿಸಿದರು.