News Karnataka Kannada
Wednesday, May 01 2024
ಹುಬ್ಬಳ್ಳಿ-ಧಾರವಾಡ

ಗಮನ ಸೆಳೆದ ಟ್ರ್ಯಾಕ್ಟರ್ ಟ್ರೈಲರ್ ಹಿಮ್ಮುಖ ಓಡಿಸುವ ಸ್ಪರ್ಧೆ

State-level reverse driven competition for tractor trailer that caught attention
Photo Credit : News Kannada

ಕುಂದಗೋಳ : ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ರೈತಾಪಿ ಸಮೂಹದಲ್ಲಿ, ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಹಿಮ್ಮುಖವಾಗಿ ಟ್ರ್ಯಾಕ್ಟರ್ ಟ್ರೈಲರ್ ಸಮೇತ ಬಿಳಿ ಗೆರೆಗಳ ಚೌಕಟ್ಟಿನೊಳಗೆ ವಾಹನ ಓಡಿಸುವ ಸ್ಪರ್ಧೆಯಲ್ಲಿ ಹಲವಾರು ರೈತಾಪಿ ಮಂದಿ ಪಾಲ್ಗೊಂಡಿದ್ದರು.

ಆದ್ರೆ, ಬಹುಮಾನ ಮಾತ್ರ ಮೂರು ಜನರ ಪಾಲಾಗಿದೆ, ಇಂದು ನಡೆದ ಟ್ರ್ಯಾಕ್ಟರ್ ಟ್ರೈಲರ್ ಹಿಮ್ಮುಖವಾಗಿ ಓಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬೆನಕಟ್ಟಿ ಗ್ರಾಮದ ರಮೇಶ್ ಬಾಗಲಕೋಟ ಅವರ ಪಾಲಾದರೇ, ದ್ವಿತೀಯ ಬಹುಮಾನ ಸವದತ್ತಿ ಗ್ರಾಮದ ಎಮ್.ಎಸ್.ಎಕ್ಕೇರಿ ಅವರ ಕೈ ಸೇರಿದೆ.

ಇನ್ನೂ ತೃತೀಯ ಬಹುಮಾನ ಆಲದಕಟ್ಟಿ ಗ್ರಾಮದ ಜಗದೀಶ್ ಕಂಟಿ ಅವರ ಪಾಲಾಗಿದೆ.  ಮೂವರನ್ನೂ ಸನ್ಮಾನ ಮಾಡಲಾಯಿತು.  ಒಟ್ಟಾರೆ ಹೊಂಡಗುಂಡಿಯ ರಸ್ತೆಯಲ್ಲಿ ವಾಹನ ಓಡಿಸಲು ಮುಂಜಾಗ್ರತೆ ಬೇಕಾದ ದಿನಗಳಲ್ಲಿ ಹಿಮ್ಮುಖವಾಗಿ ಓಡಿಸುವ ಮನರಂಜನಾ ಸ್ಪರ್ಧೆ ಎಲ್ಲರ ಗಮನ ಸೆಳೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು