ಕುಂದಗೋಳ : ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ರೈತಾಪಿ ಸಮೂಹದಲ್ಲಿ, ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಹಿಮ್ಮುಖವಾಗಿ ಟ್ರ್ಯಾಕ್ಟರ್ ಟ್ರೈಲರ್ ಸಮೇತ ಬಿಳಿ ಗೆರೆಗಳ ಚೌಕಟ್ಟಿನೊಳಗೆ ವಾಹನ ಓಡಿಸುವ ಸ್ಪರ್ಧೆಯಲ್ಲಿ ಹಲವಾರು ರೈತಾಪಿ ಮಂದಿ ಪಾಲ್ಗೊಂಡಿದ್ದರು.
ಆದ್ರೆ, ಬಹುಮಾನ ಮಾತ್ರ ಮೂರು ಜನರ ಪಾಲಾಗಿದೆ, ಇಂದು ನಡೆದ ಟ್ರ್ಯಾಕ್ಟರ್ ಟ್ರೈಲರ್ ಹಿಮ್ಮುಖವಾಗಿ ಓಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬೆನಕಟ್ಟಿ ಗ್ರಾಮದ ರಮೇಶ್ ಬಾಗಲಕೋಟ ಅವರ ಪಾಲಾದರೇ, ದ್ವಿತೀಯ ಬಹುಮಾನ ಸವದತ್ತಿ ಗ್ರಾಮದ ಎಮ್.ಎಸ್.ಎಕ್ಕೇರಿ ಅವರ ಕೈ ಸೇರಿದೆ.
ಇನ್ನೂ ತೃತೀಯ ಬಹುಮಾನ ಆಲದಕಟ್ಟಿ ಗ್ರಾಮದ ಜಗದೀಶ್ ಕಂಟಿ ಅವರ ಪಾಲಾಗಿದೆ. ಮೂವರನ್ನೂ ಸನ್ಮಾನ ಮಾಡಲಾಯಿತು. ಒಟ್ಟಾರೆ ಹೊಂಡಗುಂಡಿಯ ರಸ್ತೆಯಲ್ಲಿ ವಾಹನ ಓಡಿಸಲು ಮುಂಜಾಗ್ರತೆ ಬೇಕಾದ ದಿನಗಳಲ್ಲಿ ಹಿಮ್ಮುಖವಾಗಿ ಓಡಿಸುವ ಮನರಂಜನಾ ಸ್ಪರ್ಧೆ ಎಲ್ಲರ ಗಮನ ಸೆಳೆದಿದೆ.