ಕುಂದಗೋಳ: ಒಂದೇ ಗ್ರಾಮಕ್ಕೆ ನಾದು ಪರ್ಯಾಯ ಕಾಮಗಾರಿ, 25 ಲಕ್ಷಕ್ಕೂ ಅಧಿಕ ಹಣ ಮಂಜೂರು ಮಾಡಿಸುವುದು ಸುಲಭದ ಕೆಲಸವಲ್ಲಾ ಶಾಸಕಿ ಏನು ಮಾಡಿದ್ದಾರೆ ? ಎಂಬುವವರಿಗೆ ಅಭಿವೃದ್ಧಿಯೆ ಉತ್ತರ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಕುಂದಗೋಳ ತಾಲೂಕಿನ ಹೊಸಕಟ್ಟಿ ಗ್ರಾಮದಲ್ಲಿ ಮರಿಯಮ್ಮದೇವಿ ದೇವಸ್ಥಾನದ ಅಭಿವೃದ್ಧಿಗೆ 5 ಲಕ್ಷ, ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ 12 ಲಕ್ಷ, ಗರಡಿ ಮನೆ ಮುಂದುವರಿದ ಕಾಮಗಾರಿಗೆ 3 ಲಕ್ಷ ಸೇರಿದಂತೆ 7 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ನನ್ನನ್ನು ಅಭಿವೃದ್ಧಿ ಕೆಲಸ ಮಾಡಲು ಚುನಾಯಿಸಿದ್ದೀರಿ ಆ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುವೆ ಎಂದರು.
ಶಾಸಕರನ್ನು ಡೊಳ್ಳು ಮೇಳಗಳ ಸಮೇತ ಕರೆತಂದ ಗ್ರಾಮಸ್ಥರು, ಶಾಸಕಿ ಕುಸುಮಾವತಿ ಭೂಮಿಪೂಜೆ ನೆರವೇರಿಸಿದ ಬಳಿಕ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಹೊಸಕಟ್ಟಿ ಗ್ರಾಮದ ಮಹಿಳೆಯರು, ಮುಖಂಡರು ಉಪಸ್ಥಿತರಿದ್ದರು.