ಹುಬ್ಬಳ್ಳಿ: ಶಿವರಾತ್ರಿ ಬಂದ್ರೆ ಸಾಕು ಶಿವನ ಆರಾಧಕರಿಗೆ ಇನ್ನಿಲ್ಲದ ಸಂತಸ. ಹಗಲಿರುಳು ಎನ್ನದೆ ಶಿವನ ನಾಮಸ್ಮರಣೆ ಮಾಡುತ್ತೇಲೆ ಶಿವರಾತ್ರಿಯನ್ನು ಆಚರಣೆ ಮಾಡುತ್ತಾರೆ. ವಿಭಿನ್ನ ರೀತಿಯಲ್ಲಿ ಶಿವರಾತ್ರಿ ಆಚರಣೆ ಮಾಡುವುದುಕ್ಕೆ ಹುಬ್ಬಳ್ಳಿ ಸಾಕ್ಷಿಯಾಗಿದೆ.
ರಾಜೇಶ್ವರಿ ಪಾಟೀಲ ಎಂಬ ಭಕ್ತೆ ಕೇವಲ ಹುತ್ತದ ಮಣ್ಣಿನಿಂದ 1008 ಲಿಂಗಗಳನ್ನು ತಯಾರಿಸಿ ನಗರದ ಕೇಶ್ವಪೂರದ ಹನುಮಂತ ದೇವಸ್ಥಾನದಲ್ಲಿ ಪ್ರದರ್ಶನಕ್ಕೆ ಇರಿಸಿದ್ದಾರೆ. ಕೇವಲ ಹಾವಿನ ಹುತ್ತದ ಮಣ್ಣಿನಿಂದ ಲಿಂಗಗಳನ್ನು ತಯಾರಿಸಲಾಗಿದ್ದು, ದೇವಸ್ಥಾನದಲ್ಲಿ ಲಿಂಗ ಆಕಾರದಲ್ಲಿ ಚಿತ್ರ ಬಿಡಿಸಿ ಜೋಡಿಸಿರುವುದು ಇನ್ನೂ ವಿಭಿನ್ನವಾಗಿದ್ದು, ಭಕ್ತರ ಗಮನ ಸೆಳೆದಿದೆ.