ಹುಬ್ಬಳ್ಳಿ: ರಾಜ್ಯ ಸರ್ಕಾರದ ಆದೇಶದ ಮೇರೆಗೆ, ವಾಹನ ಚಾಲಕರು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡುತ್ತಿದ್ದ ಇ- ಚಲನ್ ಮೇಲೆ ನೀಡಿದ 50% ರಿಯಾಯಿತಿ ಅವಕಾಶವನ್ನು ಸದುಪಯೋಗ ಪಡೆಸುಕೊಳ್ಳುತ್ತಿದ್ದು, ವಾಹನ ಸವಾರನೊಬ್ಬ ಸ್ವ ಇಚ್ಛೆಯಿಂದ ಬಂದು 57 ಕೇಸ್ ಗೆ ದಂಡ ತುಂಬಿದ್ದಾನೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಸಾರ್ವಜನಿಕರ ದಂಡ ಪಾವತಿಗೆ 50% ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ನಿವಾಸಿ ಸೂರಜ್ ಸಿಂಗದ ಠಾಕೂರ್ ಎಂಬ ಯುವಕ ತನ್ನ ವಾಹನದ ಮೇಲೆ ಬರೊಬ್ಬರಿ 57 ಕೇಸ್ಗಳು ದಾಖಲಾಗಿದ್ದವು. ಸುಮಾರು 28,500 ರೂಪಾಯಿ ದಂಡವಾಗಿತ್ತು. ರಿಯಾಯಿತಿಯಾಗಿ 14,250 ರೂಪಾಯಿ ದಂಡವನ್ನು ತುಂಬಿದ್ದಾನೆ. ಪೂರ್ವ ಸಂಚಾರಿ ಎಎಸ್ಐ ಬಿ.ಬಿ ಮಾಯಣ್ಣವರ ಹಾಗೂ ಶಂಭು ರೆಡ್ಡರ್, ಕುಬೇರ ಕಾರಬಾರಿ ಸಂಚಾರಿ ಪೊಲೀಸರು ನಗರದ ಹಳೆ ಕೋರ್ಟ್ ಸರ್ಕಲ್ ಬಳಿ ದಂಡ ತುಂಬಿಸಿಕೊಂಡಿದ್ದಾರೆ.
ಇನ್ನು ದಂಡ ತುಂಬಲು ಇಂದು ಕೊನೆ ದಿನವಾಗಿದ್ದು ಸಾಕಷ್ಟು ವಾಹನ ಸವಾರರು ಬಂದು ತಮ್ಮ ತಮ್ಮ ವಾಹನದ ದಂಡ ತುಂಬುತ್ತಿದ್ದಾರೆ.