ಹುಬ್ಬಳ್ಳಿ: ಬಿಜೆಪಿ ಪಕ್ಷದವರು ದೇಶದಲ್ಲಿ ಯದ್ಧದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಈ ಚುನಾವಣೆ ಕೋಮವಾದಿಗಳನ್ನು ಸೋಲಿಸಬೇಕು ಅವರು ಮತ್ತೆ ಅಧಿಕಾರಕ್ಕೆ ಬಂದರೆ ಕೋಮುವಾದ ಆರಂಭವಾಗಿ ದೇಶ ನಾಶವಾಗುತ್ತದೆ ಎಂದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ರಕ್ಷಣೆ ಮಾಡಬೇಕಾದವರೂ ಪ್ರಚೋದನೆ ಹೇಳಿಕೆ ನೀಡುತ್ತಿದ್ದಾರೆ.
ಅಮಿತ್ ಶಾ, ಟಿಪ್ಪು ಹಾಗೂ ಅಬ್ಬಕ್ಕ, ಟಿಪ್ಪು ಸಾವರ್ಕರ್ ಎನ್ನುತ್ತಿದ್ದಾರೆ. ಜನರ ಸಮಸ್ಯೆ ಬಗ್ಗೆ ಪ್ರಸ್ತಾಪ ಆಗುವ ಬದಲು ಹೊಡಿಬಡಿ ಅಂತಾ ಹೇಳ್ತಿದ್ದಾರೆ. ಯಾವ ಧರ್ಮವೂ ಇದನ್ನ ಒಪ್ಪಲ್ಲ. ಬಿಜೆಪಿ ಸಮಾಜದ ಒಡೆದು ಅಶಾಂತಿ ನಿರ್ಮಾಣ ಮಾಡ್ತಿದ್ದಾರೆ.
ಸಮಾಜಕ್ಕೆ ಸುಧಾರಣೆ ಮಾಡಿದವರನ್ನು ಎಲ್ಲರನ್ನು ಗೌರವಿಸಬೇಕು. ದೇಶದ ಪ್ರೇಮ ಬಗ್ಗೆ ಮಾತನಾಡಿ ದ್ವೇಷ ಕಕ್ಕುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ಜಾತ್ಯಾತೀತ ಸಿದ್ಧಾಂತದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
ಕೋಮುವಾದಿಗಳೊಂದಿಗೆ ಕುಮಾರಸ್ವಾಮಿ ಸರ್ಕಾರ ರಚಿಸಿದ್ದರು. ರಾಜ್ಯ ಉದ್ಧಾರ ಮಾಡೋದಕ್ಕೆ ಅವರು ಕೈ ಜೊಡಿಸಿದ್ದಾರಾ ಎಂದು ಕುಮಾರಸ್ವಾಮಿ ಜಾತ್ಯಾತೀತ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.