ಹುಬ್ಬಳ್ಳಿ: ಅಭಿಮಾನಿಗಳ ಪ್ರೀತಿಯ ರಾಜರತ್ನ ಅಪ್ಪು ದೊಡ್ಮನೆ ಹುಡುಗ ಸರಳತೆಯ ಮಾನವಿಯತೆಯ ಸಹಕಾರ ಮೂರ್ತಿ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿ ಎರಡು ವರ್ಷಗಳಾದವು ಅದಕ್ಕಾಗಿ ಅವರ ಸ್ಮರಣಾರ್ಥವಾಗಿ ಇದೇ ಅ.28 ರಂದು ಬೆಳಿಗ್ಗೆ ಹುಬ್ಬಳ್ಳಿಯ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಎಲ್ಲಾ ಅಪ್ಪು ಅಭಿಮಾನಿಗಳು ಹಾಗೂ ಧಾರವಾಡ ಮತ್ತು ಹುಬ್ಬಳ್ಳಿ ಹಾಗೂ ನವನಗರದ ಸುತ್ತ ಮುತ್ತಲಿನ ಗ್ರಾಮಗಳ ಜನರು ಬಂದು ರಕ್ತದಾನ ಮಾಡಿ ಅಪ್ಪು ಅವರ ಸ್ಮರಣಾರ್ಥವಾಗಿ ಹಮ್ಮಿಕೊಂಡ ಈ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಶಿವಕುಮಾರ ರಟ್ಟಿಹಳ್ಳಿ ಮೊ: 6362140508 ಸಂಪಕಿ೯ಸಲು ಕೋರಿದ್ದಾರೆ.