ನವದೆಹಲಿ: ಶೀಘ್ರದಲ್ಲೇ ಮೈಸೂರಿನಲ್ಲಿಯೂ ಮೆಟ್ರೋ ರೈಲು ಸೇವೆ ಒದಗಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಬೈಯಪ್ಪನಹಳ್ಳಿ -ಕೃಷ್ಣರಾಜಪುರ ನಡುವಿನ ಮೆಟ್ರೋ ರೈಲು ಸೇವೆಗೆ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕೆಲವು ವರ್ಷಗಳ ಹಿಂದೆ ದೆಹಲಿ-ಮೀರತ್-ಘಜಿಯಾಬಾದ್ ನ್ಯಾಷನಲ್ ಕಾರಿಡಾರ್ ಯೋಜನೆಗೆ ಚಾಲನೆ ನೀಡಿದ್ದೆ.
ಇಂದು ಶಹಿದಾಬಾದ್ ನಿಂದ ದುಹಾಯ್ ಡಿಪೋ ವರೆಗೆ ನಮೋ ಭಾರತ್ ರೈಲು ಸಂಚಾರ ಪ್ರಾರಂಭಿಸಲಾಗಿದೆ ಎಂದರು. ಕರ್ನಾಟಕದಲ್ಲಿ ಸಿಎಂ ಸಿಎಂ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಿದರು.