ಧಾರವಾಡ: ಕರ್ನಾಟಕ ವಿಧಾಸಭೆಗೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿದ್ದು, ಇಂದು ನವಲಗುಂದದಲ್ಲಿ 5, ಕುಂದಗೋಳದಲ್ಲಿ 5, ಧಾರವಾಡದಲ್ಲಿ 3, ಹುಬ್ಬಳ್ಳಿ, ಧಾರವಾಡ ಪೂರ್ವದಲ್ಲಿ 2, ಹುಬ್ಬಳ್ಳಿ, ಧಾರವಾಡ ಸೆಂಟ್ರಲ್ದಲ್ಲಿ 1, ಹುಬ್ಬಳ್ಳಿ, ಧಾರವಾಡ ಪಶ್ಚಿಮದಲ್ಲಿ 4 ಮತ್ತು ಕಲಘಟಗಿಯಲ್ಲಿ1 ನಾಮಪತ್ರ ಸೇರಿದಂತೆ ಒಟ್ಟು 21 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನವಲಗುಂದ-69 ವಿಧಾನಸಾಭಾ ಮತಕ್ಷೇತ್ರಕ್ಕೆ ಶಂಕರ ಪಾಟೀಲ ಮುನೇನಕೊಪ್ಪ (ಭಾ.ಜ.ಪ) ಎರಡು ನಾಮಪತ್ರಗಳನ್ನು, ಮೈಲಾರಪ್ಪ ಭರಮಪ್ಪ ಚವಡಿ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಶಿವಾನಂದ ಬಸಪ್ಪ ಕರಿಗಾರ (ಪಕ್ಷೇತರ ಅಭ್ಯರ್ಥಿ), ಮಲ್ಲಿಕಾರ್ಜುನಗೌಡ ಬಾಳನಗೌಡರ (ಪಕ್ಷೇತರ ಅಭ್ಯರ್ಥಿ) ಮತ್ತು ಕುಂದಗೋಳ-70 ವಿಧಾನಸಭಾ ಮತಕ್ಷೇತ್ರಕ್ಕೆ ಸಿದ್ಧನಗೌಡ ಚಿಕ್ಕನಗೌಡ್ರ (ಪಕ್ಷೇತರ ಅಭ್ಯರ್ಥಿ), ಮಂಜುನಾಥಗೌಡ ಪಾಟೀಲ (ಭಾ.ಜ.ಪ.) ಎರಡು ನಾಮಪತ್ರಗಳನ್ನು ಮತ್ತು ಶರಣಪ್ಪ ನಿಂಗಪ್ಪ ಕುರಿಯವರ (ಪಕ್ಷೇತರ), ನಿರಂಜನಯ್ಯ ರುದ್ರಯ್ಯ ಮಣಕಟ್ಟಿಮಠ (ಆಮ್ ಆದ್ಮ ಪಕ್ಷ), ಮತ್ತು ಧಾರವಾಡ-71 ವಿಧಾನಸಭಾ ಮತಕ್ಷೇತ್ರಕ್ಕೆ ರಾಜಶೇಖರಯ್ಯ ಕಂತಿಮಠ (ಪಕ್ಷೇತರ), ಮಧುಲತಾ ಗೌಡರ (ಸೋಸಿಯಾಲಿಸ್ಟ್ ಯುನಿಟಿ ಸೆಂಟರ್ ಆಪ್ ಇಂಡಿಯಾ (ಕಮ್ಯುನಿಸ್ಟ್), ವಿನಯ ಕುಲಕರ್ಣಿ (ಭಾ.ರಾ.ಕಾಂ) ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ-72 ವಿಧಾನಸಭಾ ಮತಕ್ಷೇತ್ರಕ್ಕೆ ಬಸವರಾಜ ತೇರದಾಳ (ಆಮ್ ಆದ್ಮ ಪಕ್ಷ), ಪ್ರಸಾದ ಅಬ್ಬಯ್ಯ (ಭಾ.ರಾ.ಕಾಂ) ಮತ್ತು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್-73 ವಿಧಾನಸಭಾ ಮತಕ್ಷೇತ್ರಕ್ಕೆ ರಾಜು ನಾಯಕವಾಡಿ (ಸ್ವತಂತ್ರ ಅಭ್ಯರ್ಥಿ) ಮತ್ತು ಹುಬ್ಬಳ್ಳಿ-ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರಕ್ಕೆ ಅರವಿಂದ ಮುಗದೂರ (ಆಮ್ ಆದ್ಮ ಪಕ್ಷು, ಪಾಂಡುರಂಗ ನೀರಲಕೇರಿ (ಭಾ.ರಾ.ಕಾಂ), ರಾಜಶೇಖರಯ್ಯ ವಿರುಪಾಕ್ಷಯ್ಯ ಕಂತಿಮಠ (ಪಕ್ಷೇತರ), ಮನ್ನಾರಿ ವಾದಿರಾಜ (ಆಲ್ ಇಂಡಿಯಾ ಹಿಂದುಸ್ಥಾನ ಕಾಂಗ್ರೆಸ್ ಪಾರ್ಟಿ) ಮತ್ತು ಕಲಘಟಗಿ-75 ವಿಧಾನಸಭಾ ಮತಕ್ಷೇತ್ರಕ್ಕೆ ಸಂತೋಷ ಎಸ್. ಲಾಡ್ (ಭಾ.ರಾ.ಕಾಂ) ಅವರು ನಾಮತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.