News Karnataka Kannada
Sunday, April 28 2024
ಹುಬ್ಬಳ್ಳಿ-ಧಾರವಾಡ

ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಸ್ವಗೃಹಕ್ಕೆ ಆಗಮನ: ಭಾವುಕರಾಗಿ ಕಣ್ಣೀರು ಹಾಕಿದ ಪತ್ನಿ

Jagadish Shettar's wife breaks down in tears as she joins Congress
Photo Credit : News Kannada

ಹುಬ್ಬಳ್ಳಿ: ಬಿಜೆಪಿಯಿಂದ ಟಿಕೆಟ್ ವಂಚಿತಗೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನಿಂದ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಶೆಟ್ಟರ್ ಅವರನ್ನು ಕುಟುಂಬಸ್ಥರು ಮತ್ತು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪುಷ್ಪಗಳಿಂದ ಸ್ವಾಗತ ಮಾಡಿಕೊಂಡರು.

ಇನ್ನು, ಶೆಟ್ಟರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡದ ಕಾರಣ ಕೆಲ ಬಿಜೆಪಿ ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಭಿಮಾನಿಗಳು ಮಾತ್ರ ಶೆಟ್ಟರ್ ದಾರಿಯಲ್ಲೇ ಸಾಗಲು ಸಿದ್ಧರಾಗಿದ್ದಾರೆ. ಶೆಟ್ಟರ್ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಹರಿದು ಬರುತ್ತಿದ್ದಾರೆ.

ಭಾವುಕರಾಗಿ ಕಣ್ಣೀರು ಹಾಕಿದ ಪತ್ನಿ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು, ಇಂದು ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆ, ಪತಿ ಶೆಟ್ಟರ್‌ನ್ನು ತಬ್ಬಿಕೊಂಡು ಪತ್ನಿ ಶಿಲ್ಪಾ ಶೆಟ್ಟರ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಬಿಜೆಪಿ ಗುಲಾಮಗಿರಿಗೆ ನನ್ನ ಗಂಡ ಬಲಿ ಆಗಬೇಕಾ : ಶಿಲ್ಪಾ ಶೆಟ್ಟರ್ ಕಣ್ಣೀರು

ಎಷ್ಟು ತಾಳ್ಮೆಯಿಂದ ಇದ್ರು ನನ್ನ ಗಂಡನನ್ನು ಬಿಜೆಪಿ ಅವರು ಕುಗ್ಗಿಸುತ್ತಿದ್ದಾರೆ, ಹೀನಾಯ, ಅಪಮಾನ ಮಾಡುತ್ತಿದ್ದಾರೆ. ಕ್ಷೇತ್ರದ ಜನಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ.  ಜಗದೀಶ್ ಶೆಟ್ಟರ್ ಬಹಳ ನೊಂದುಕೊಂಡಿದ್ದಾರೆ. ಆದರೆ ಅವರು ಹೇಳುವುದಿಲ್ಲಾ ಎಂದು ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಕಣ್ಣೀರು ಹಾಕಿದರು.

ಒಬ್ಬರಿಗೂ ತಮ್ಮ ನೋವನ್ನು ತೋರಿಸಿ ಕೊಡುವುದಿಲ್ಲಾ. ಒಂದು ಕಣ್ಣೀರು ಹನಿ ನೀರು ಬಂದಿಲ್ಲಾ. ಅವಮಾನವನ್ನು ಎಷ್ಟು ಸಲ ಸಹಿಸಿಕೊಳ್ಳಬೇಕು, ಎಷ್ಟ ಸಲ ಗುಲಾಮಗಿರಿ ಮಾಡಬೇಕು ಎಂದು ಅಳಲು ತೋಡಿಕೊಂಡರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು