ಧಾರವಾಡ: ಗ್ರಾಮದ ಅಭಿವೃದ್ಧಿ ಜನರ ಕಣ್ಣ ಮುಂದಿದೆ. 17 ಕೋಟಿ ರೂ. ಎಲ್ಲಿಂದ ತಂದಿದ್ದಾರೆ ಎಂದು ತವನಪ್ಪ ಅಷ್ಟಗಿ ಕೇಳಿದ್ದಾರೆ. ಈ ಕುರಿತು ತನಿಖೆಗೆ ನಾನು ಸಿದ್ಧ ಎಂದು ಅಮೃತ ದೇಸಾಯಿ ಹೇಳಿದರು.
ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ನಡೆದ ಬಹುರಂಗ ಸಭೆಯಲ್ಲಿ ಮಾತನಾಡಿದ ಅವರು,2019 ರಲ್ಲಿ ಭೀಕರ ಮಳೆಯಾಯಿತು. ಯಡಿಯೂರಪ್ಪ ಬಿದ್ದ ಮನೆಗೆ 5 ಲಕ್ಷ ಪರಿಹಾರ ಕೊಟ್ಟರು, ಇದೀಗ ನನ್ನ ಕ್ಷೇತ್ರದಲ್ಲಿ 3500 ಮನೆಗಳು ನಿರ್ಮಾಣವಾಗಿದೆ. ಅಭಿವೃದ್ಧಿ ಎಂದರೆ ಬಿಜೆಪಿ. ಧಾರವಾಡದಲ್ಲಿ ಗುಂಡಾ ರಾಜ್ಯ ನಿರ್ಮೂಲನೆ ಮಾಡಿ ರಾಮರಾಜ್ಯ ಕಟ್ಟಿದ್ದೇವೆ ಎಂದರು.
ತವನಪ್ಪ ಅಷ್ಟಗಿ ಬಿಜೆಪಿಯಿಂದ ಉಪಕಾರ ಪಡೆದಿದ್ದಾರೆ. ಅದಕ್ಕಾಗಿ ಅವರು ಗೌರವದಿಂದ ಮಾತನಾಡಬೇಕು ಎಂದರು.