News Karnataka Kannada
Monday, May 13 2024
ಹುಬ್ಬಳ್ಳಿ-ಧಾರವಾಡ

ಈದ್ಗಾ ಗಣಪತಿ ವಿಸರ್ಜನೆಗೆ ಬಸನಗೌಡ ಪಾಟೀಲ್ ಯತ್ನಾಳ ಭಾಗಿ- ಬೆಲ್ಲದ

Basanagouda Patil Yatnal participates in Idgah Ganapati visarjan
Photo Credit : News Kannada

ಹುಬ್ಬಳ್ಳಿ: ಯಾವುದೇ ತೊಂದರೆ ಇಲ್ಲದೆ ಗಣೇಶ ಪ್ರತಿಷ್ಠಾಪನೆ ಆಗಿದೆ. ಈದ್ಧಾ ಮೈದಾನದಲ್ಲಿ ಸರಳ ರೀತಿಯಲ್ಲಿ ಗಣೇಶ ಪ್ರತಿಷ್ಠಾಪನೆ ಆಗಬೇಕಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರದಲ್ಲಿ ಅದು ಆಗಲಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ ಪ್ರತಿಷ್ಠಾಪನೆ ಮಾಡಿದ್ದ ಸಂಸ್ಥೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವ್ ಪಾಸ್ ಮಾಡಲಾಗಿತ್ತು. ಆದ್ರೇ ಪಾಲಿಕೆ ಆಯುಕ್ತರ ಮೇಲೆ ಒತ್ತಡ ಇರೋ ಕಾರಣಕ್ಕೆ ಠರಾವು ಆದೇಶಕ್ಕೆ ಬರಲಿಲ್ಲ ಎಂದರು.

ಸಂಘಟನೆಗಳು ನಮ್ಮ ಗಮನಕ್ಕೆ ತಂದ ಮೇಲೆ ಎರಡುದಿನ ಹೋರಾಟ ಮಾಡಬೇಕಾಯ್ತು. ಕೊನೆಗೆ ಸರ್ಕಾರ ಅಲ್ಪ ಸಂಖ್ಯಾತರ ಒಲೈಕೆ ಬಿಟ್ಟು ನಮಗೆ ಅನುಮತಿ ಸರ್ಕಾರ ಕೊಟ್ಟಿದೆ. ನಿನ್ನೆ ಶಾಂತ ರೀತಿಯಲ್ಲಿ ಈದ್ಧಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಯಾಗಿದೆ. ನಾಳೆ 12 ಗಂಟೆಗೆ ವಿಸರ್ಜನೆಯಾಗಲಿದೆ. ಗಣೇಶ ವಿಸರ್ಜನೆ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.

ಯತ್ನಾಳ ಅಲ್ಲದೆ ಬಿಜೆಪಿ ಅನೇಕ ಮುಖಂಡರು ವಿಸರ್ಜನೆ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಹಿಂದೂ ಸಂಘಟನೆಗಳು ಭಾಗಿಯಾಗಲಿದ್ದಾರೆ. ಸಿಟಿ ರವಿ ಕೂಡಾ ವಿಸರ್ಜನೆ ವೇಳೆ ಭಾಗಿಯಾಗಬಹುದು ಎಂದು ಅವರು ಮಾಹಿತಿ ನೀಡಿದರು.

ಇನ್ನೂ ಹೋರಾಟದ ಕುರಿತು ಮಾತನಾಡಿದ ಅವರು, ನಮಗೆ ಹೋರಾಟ ಬಿಟ್ಟು ಬೇರೆ ಮಾರ್ಗ ಇರಲಿಲ್ಲ. ಗಣೇಶ ಪ್ರತಿಷ್ಠಾಪನೆಗೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಇತ್ತು. ನಾವು ಪಾಲಿಕೆ ಆಯುಕ್ತರ ಘೋಷಣೆ ಕೂಗಿಲ್ಲ. ಪಾಲಿಕೆ ಆಯುಕ್ತರು ಒಳ್ಳೆಯವರೇ ಎಂದ ಅವರು, ಆದರೆ ಅವರಿಗೆ ಒತ್ತಡ ಇತ್ತು ಎಂದ ಅರವಿಂದ ಬೆಲ್ಲದ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು