News Karnataka Kannada
Friday, May 10 2024
ಹುಬ್ಬಳ್ಳಿ-ಧಾರವಾಡ

ಶೆಟ್ಟರ್ ಯಾವಾಗಲೂ ಪಕ್ಷ ದ್ರೋಹ ಕೆಲಸ ಮಾಡಿಲ್ಲಾ, ಕಮಲ ಅನ್ಯಾಯ ಮಾಡಿದೆ- ಜಗದೀಶ್ ಶೆಟ್ಟರ್

Shettar has not always betrayed the party, Kamala has done injustice: Shettar
Photo Credit : News Kannada

ಹುಬ್ಬಳ್ಳಿ: ಪ್ರಲ್ಹಾದ ಜೋಶಿ ದಿಲ್ಲಿಗೆ ಕರೆದಿದ್ದೀವಿ, ವರಿಷ್ಠ ಜೊತೆ ಮಾತನಾಡಿಸಿದ್ದೀವಿ, ರಾಜ್ಯ ಸಭಾ ಮೆಂಬರ್ ಕೊಡುತ್ತೇವೆ ಅಂತ ಹೇಳದ್ದೀವಿ ಅಂತ ಹೇಳಿದ್ದಾರೆ. ಐಡಿಯೋಲಜಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಹೊದ್ರು ಅಂತ ಪ್ರಶ್ನೆ ಮಾಡುತ್ತಾರೆ. ಸರ್ಕಾರ ಮಾಡುವುದಾಗಿ ಕಾಂಗ್ರೆಸ್ ನಿಂದ 15 ಜನ ಶಾಸಕರನ್ನು ಕರೆದುಕೊಂಡು ಬಂದ ಐಡಿಯೋಲಜಿ ಬದಲಾವಣೆ ಮಾಡಿದವರು ಬಿಜೆಪಿ ಮುಖಂಡರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ಸುದ್ದಿ ಗೋಷ್ಠಿಯಲ್ಕಿ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ ಒಡೆದು ಕೆಜಿಪಿ ಕಟ್ಟಿದರು ಆವಾಗ ಐಡಿಯೋಲಜಿ ಎಲ್ಲಿ ಹೋಗಿತ್ತು? ಯಡಿಯೂರಪ್ಪ ಬಗ್ಗೆ ಗೌರವವಿದೆ. ಬಿಜೆಪಿ ಕಟ್ಟಿ ಬೆಳಸಿದ್ದಂತಹ ವ್ಯಕ್ತಿ. ಅಪಮಾನ ಕಾರಣದಿಂದ ಬಿಜೆಪಿಯಿಂದ ಹೊರಗೆ ಬಂದೆ. ಯಾವ ಸ್ಥಿತಿಯಲ್ಲಿ ಕಾಂಗ್ರೆಸ್ ಪಾರ್ಟಿ ಸೇರಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಶೆಟ್ಟರ್ ಯಾವಾಗಲೂ ಪಕ್ಷ ದ್ರೋಹ ಕೆಲಸ ಮಾಡಿಲ್ಲಾ. ಬಿಜೆಪಿ ನನಗೆ ಅನ್ಯಾಯ ಮಾಡಿದೆ. ಹಿರಿಯರನ್ನು  ಅಗೌರವದಿಂದ ಕಂಡಿದೆ. ಸ್ವಾಭಾಮಾನಿಕ್ಕೆ ಪೆಟ್ಟು ಬಿದ್ದರಿಂದ ಹೊರಗೆ ಬಂದಿದ್ದೇನೆ ಎಂದರು.

 ಶೆಟ್ಟರ್ ಸೋಲಿಸಲು ಆಂದೋಲನ ನಡೆದಿದೆ
ಜಗದೀಶ್ ಶೆಟ್ಟರ್ ಸೋಲಿಸಬೇಕು ಎಂಬ ಆಂದೋಲನ ನಡೆದಿದೆ. ಯಾಕೆ ಈ ಬಡಪಾಯಿ ಮೇಲೆ ಕಣ್ಣು ಬಿದ್ದಿದೆಯೋ ಗೊತ್ತಿಲ್ಲ.  ಬಿಜೆಪಿ ನಾಯಕರು ಶೆಟ್ಟರ್ ಸೋಲಿಸಬೇಕು ಎಂಬ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದರು.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್  ಗೆ ಯಾಕೆ ಇಷ್ಟು ಮಹತ್ವ ಕೊಟ್ಟಿದ್ದಾರೆ ಗೊತ್ತಿಲ್ಲಾ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ರಾಷ್ಟ್ರೀಯ ಸುದ್ದಿ ಆಗುತ್ತಿದೆ. ಹಲವು ನಾಯಕರು ಕಾಂಗ್ರೆಸ್ , ಜೆಡಿಎಸ್ ಗೆ ಸೇರ್ಪಡೆ ಯಾಗಿದ್ದಾರೆ. ಅದು ಸಹಜ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರ್ಪಡೆ ಆಗುವುದು. ಆದರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು ಅಪರಾಧವೆಂಬಂತೆ ಪ್ರಶ್ನಿಸುತ್ತಾರೆ. ನಾನು ಬಿಜೆಪಿಗೆ ಏನು ಅನ್ಯಾಯ ಮಾಡಿದ್ದೇನೆ. 7 ನೇ ಬಾರಿ ಸ್ಪರ್ಧೆ ಮಾಡಲು ಟಿಕೆಟ್ ಕೊಡಿ ಅಂತ ಕೇಳಿದ್ದೆ ಅಷ್ಟೇ ಎಂದರು‌.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು