ಕಾಸರಗೋಡು: ನೂರಾರು ರೋಗಿಗಳಿಗೆ ಹೆಚ್ಚು ಅನುಕೂಲವಾಗುವ ಕುಂಬಳೆ ಸಮೀಪದ ಪುತ್ತಿಗೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸಿಬಂದಿಗಳಿಲ್ಲದೆ ಕೊರಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಉಂಟಾಗಿದೆ.
ಈ ಕೇಂದ್ರದಲ್ಲಿ ಸಿಬಂದಿಗಳ ಕೊರತೆ ಉಂಟಾಗಿದೆ. ದಿನಂಪ್ರತಿ ನೂರಾರು ರೋಗಿಗಳಿಗೆ ಈ ಆರೋಗ್ಯ ಕೇಂದ್ರ ವರದಾನವಾಗಿದೆ. ಆದರೆ ವೈದ್ಯರು ಸೇರಿದಂತೆ ಸಿಬಂದಿಗಳು ಇಲ್ಲದೆ ಇರುವುದರಿಂದ ಸಮಸ್ಯೆಗೆ ಕಾರಣವಾಗುತ್ತಿದೆ.
ಕಳೆದ ಒಂದು ವರ್ಷದಿಂದ ಆರೋಗ್ಯಾಧಿಕಾರಿ ಈ ಕೇಂದ್ರದಲ್ಲಿಲ್ಲ. ಜೂನಿಯರ್ ಆರೋಗ್ಯಾಧಿಕಾರಿ ಹುದ್ದೆ ಒಂದು ವರ್ಷದಿಂದ ಖಾಲಿ ಬಿದ್ದಿದೆ. ಮೂರು ಜೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್, ಎನ್. ಎಚ್. ಐ ಹುದ್ದೆಗಳು ಖಾಲಿ ಬಿದ್ದಿವೆ.
ದಿನಂಪ್ರತಿ ನೂರಾರು ರೋಗಿಗಳು ಈ ಆರೋಗ್ಯ ಕೇಂದ್ರಕ್ಕೆ ತಲಪುತ್ತಿದ್ದಾರೆ. ಇದರಲ್ಲೆ 20 ರಿಂದ 30 ಮಂದಿ ಪ್ರತಿವಾರ ಈ ಆಸ್ಪೆತ್ರೆಗೆ ತಲಪಿ ಚಿಕಿತ್ಸೆ ಪಡೆಯಬೇಕಿದೆ. ಇವರು ದೂರದ ಬೇರೆ ಯಾವುದಾದರೂ ಸರಕಾರೀ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಿದೆ. ಇದಲ್ಲದೆ ಆರೋಗ್ಯ ವಲಯದ ಹಲವು ಸಮೀಕ್ಷೆಗಳು, ಎಂ .ಆರ್ ವ್ಯಾಕ್ಸಿನ್ ಹಾಗೂ ಇತರ ವೈದ್ಯಕೀಯ ಶಿಬಿರ ನಡೆಸಲು ಸಿಬಂದಿಗಳಲ್ಲೇ ಅಡ್ಡಿಯಾಗುತ್ತಿದೆ. ಈಗ ಇರುವ ಸಿಬಂದಿಗಳಿಗೆ ಕೆಲಸದ ಅಧಿಕ ಹೊರೆಯಾಗಿ ಪರಿಣಮಿಸಿದೆ.
ಇದಲ್ಲದೆ ಬಾಡೂರು, ಕಟ್ಟತ್ತಡ್ಕ, ಮೂಗು ಮೊದಲಾದೆಡೆ ಆರೋಗ್ಯ ಕೇಂದ್ರಗಳಿದ್ದರೂ ಸಿಬಂದಿಗಳ ಕೊರತೆಯೇ ದೊಡ್ಡ ಸಮಸ್ಯೆ ಯಾಗಿ ಪರಿಣಮಿಸಿದೆ. ಇದರಿಂದ ಸಾವಿರಾರು ರೋಗಿಗಳಿಗೆ ಅನುಕೂಲವಾಗುವ ಸರಕಾರಿ ಆಸ್ಪತ್ರೆಗಳ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸಬೇಕಿದೆ.