ಮಂಡ್ಯ: ಇಲ್ಲಿನ ಹಿಂದೂ-ಮುಸ್ಲಿಂ ಜೋಡಿಯೊಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಮಾದರಿಯಾಗಿದ್ದಾರೆ.
ಜನಪರ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಮಂಡ್ಯ ಜಿಲ್ಲೆಯ ವರ ಶಿವಕುಮಾರ್ ಗುಳಘಟ್ಟ ಮತ್ತು ಬಳ್ಳಾರಿ ಮೂಲದ ವಧು ನಸ್ರೀನ್ ಅವರು ಶುಕ್ರವಾರ ಮಂಡ್ಯದ ಹಿಂದಿ ಭವನದಲ್ಲಿ ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಳ್ಳುವ ಮೂಲಕ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಒಲವಿನ ಮದುವೆ ಎಂಬ ಸರಳ ಸೂತ್ರದಡಿಯಲ್ಲಿ ಮದುವೆಯಾದ ನವ ಜೋಡಿ, ಅಂತರ್ ಧರ್ಮೀಯ ಮದುವೆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.