ಕಾಸಗೋಡು: ದಶಕಗಳ ಕನಸಾದ ಆಯಂ ಕಡವು ಸೇತುವೆ ಉದ್ಘಾಟನೆಗೆ ಸಜ್ಜಾಗಿದೆ. ಪುಲ್ಲೂರು ಪೆರಿಯ ಗ್ರಾಮ ಪಂಚಾಯತ್ ಮತ್ತು ಬೇಡಡ್ಕ ಗ್ರಾಮ ಪಂಚಾಯತ್ ನ್ನು ಸಂಪರ್ಕಿಸುವ ವಾವಡ್ಕ ಹೊಳೆಗೆ ಈ ಸೇತುವೆ ನಿರ್ಮಿಸಲಾಗಿದೆ.
ಸುಮಾರು ೧೪ ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು.
ಉತ್ತರ ಕೇರಳದಲ್ಲಿ ಅತೀ ಎತ್ತರದ ಸೇತುವೆಯಾಗಿದ್ದು , ಈ ಸೇತುವೆ ನಿರ್ಮಾಣದೊಂದಿಗೆ ಪರಿಸರವಾಸಿಗಳ ದಶಕಗಳ ಕನಸು ನನಸಾಗುತ್ತಿದೆ.
ಸುಮಾರು ೨೫. ೩೨ ಮೀಟರ್ ಉದ್ದದ ಈ ಸೇತುವೆ ೧೧. ೫ ಮೀಟರ್ ಅಗಲ ಹೊಂದಿದೆ. ಕುಂಡಂಗುಯಿ , ಬೇಡಡ್ಕ ,ಪೆರ್ಲಡ್ಕ , ಕರಿಚ್ಚೇರಿ ಪ್ರದೇಶ ವ್ಯಾಪ್ತಿಯ ಜನರಿಗೆ ಪ್ರಯೋಜನವಾಗಲಿದೆ. ಸುಮಾರು ೫೦ ಸಾವಿರ ಜನರಿಗೆ ಈ ಸೇತುವೆ ಪ್ರಯೋಜನಕಾರಿಯಾಗಲಿದೆ.
ಸೇತುವೆಯ ಕಾಮಗಾರಿ ಅಂತಿಮ ಹಂತಕ್ಕೆ ತಲಪಿ ಉದ್ಘಾಟನೆಗೆ ಸಿದ್ಧವಾಗಿದ್ದು , ಶೀಘ್ರ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.
ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು , ಶಾಸಕ ಕೆ . ಕುಞರಾಮನ್ , ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ .ಪಿ ರಾಜ್ ಮೋಹನ್, ಇಂಜಿನಿಯರ್ ವಿನೋದ್ ಕುಮಾರ್ , ಬೇಡಡ್ಕ ಪಂಚಾಯತ್ ಅಧ್ಯಕ್ಷ ರಾಮಚಂದ್ರನ್ , ಪುಲ್ಲೂರು ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಶಾರದಾ ಎಸ್ . ನಾಯರ್ ಮೊದಲಾದವರು ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು