ಶ್ರೀನಗರ: ಕುಪ್ವಾರಾ–ತಂಗಧರ್ ರಸ್ತೆಯ ಖೂನಿ ನಲ್ಲಾಹ್ ಬಳಿ ಶುಕ್ರವಾರ ಸಂಭವಿಸಿದ ಹಿಮಕುಸಿತದಲ್ಲಿ ಪ್ರಯಾಣಿಕ ವಾಹನವೊಂದು ಸಿಲುಕಿ ಹನ್ನೊಂದು ಮಂದಿಮೃತಪಟ್ಟ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಮಕುಸಿತಕ್ಕೆ ಸಿಲುಕಿದ ವೇಳೆ ಪೊಲೀಸರು ಮೂವರನ್ನು ರಕ್ಷಿಸಿದ್ದರು. ಇನ್ನೂ ಒಂದು ಮೃತ ದೇಹವನ್ನು ಶುಕ್ರವಾರವೇ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿತ್ತು. ಶನಿವಾರ ಹತ್ತು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಕುಪ್ವಾರಾ ಉಪಆಯುಕ್ತ ಖಲಿದ್ ಜಹಾಂಗೀರ್ ಅವರು ಮಾಃಇತಿ ನೀಡಿದ್ದಾರೆ.