ಆದರೆ ‘ಎರಡೂ ನರಿಗಳು ದೂರವಿದ್ದಷ್ಟು ಹುಷಾರಾಗಿರ್ತೀರ’ ಎನ್ನುವ ಅಡಿಬರಹ ಎಲ್ಲರ ಗಮನ ಸೆಳೆಯುತ್ತಿದೆ.
ಈ ಸಿನಿಮಾದ ಟೈಟಲ್ಲೇ ವಿಶಿಷ್ಟವಾಗಿದೆ. ಅದರ ಜೊತೆಗೆ ಯೋಗರಾಜ್ ಭಟ್ ನಿರ್ದೇಶನ ಎಂದರೆ ಇಂತಹ ಕ್ರಿಯೇಟಿವಿಟಿ ಇರಲೇಬೇಕು. ‘ನರಿ ಬುದ್ಧಿ ಎನ್ನುವುದು ಮನುಷ್ಯನಲ್ಲಿ ಇದ್ದೇ ಇದೆ. ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ ಒಟ್ಟಾರೆ ತಲೆ ತಲಾಂತರಗಳಿಂದಲೂ ನರಿ ಬುದ್ಧಿ ಎಂಬುದು ಮನುಷ್ಯನ ರಕ್ತದಲ್ಲಿ ಸೇರಿಕೊಂಡಿದೆ. ಅತ್ಯಂತ ನೀಚ ಬುದ್ಧಿಯ, ಕುತಂತ್ರೀ ಬುದ್ಧಿಯ ನರಿಗಳನ್ನು ಕರಟಕ, ಧಮನಕ ಎಂದು ಕರೆಯುತ್ತಿದ್ದರೆಂದು ಪುರಾಣಗಳಲ್ಲಿ ಉಲ್ಲೇಖಗಳಿವೆ. ನಮ್ಮ ಸಿನಿಮಾ ಸಹ ಅಂಥಹದೇ ಕುತಂತ್ರಿಗಳಿಬ್ಬರ ಕತೆಯಾಗಿರುವ ಕಾರಣ ಅದೇ ಹೆಸರನ್ನು ನಾವು ಇಟ್ಟಿದ್ದೇವೆ’ ಎಂದಿದ್ದಾರೆ ಭಟ್ಟರು.
ಶಿವರಾಜಕುಮಾರ್, ಪ್ರಭುದೇವ, ರವಿಶಂಕರ್, ತನಿಕೆಲ್ಲ ಭರಣಿ, ರಂಗಾಯಣ ರಘು, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನ ನೀಡಿರುವ ಈ ಸಿನಿಮಾವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.