News Karnataka Kannada
Thursday, May 09 2024
ಸಾಂಡಲ್ ವುಡ್

ಜುಲೈ 14 ರಂದು ಹೊಸಬರ ಸಿನಿಮಾ ‘ದಾಮಾಯಣ’ ಬಿಡುಗಡೆ

damayana movie
Photo Credit : By Author

ಹೊಸಬರ ಸಿನೆಮಾವೊಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಇತ್ತೀಚೆಗೆ ಕಂಟೆಂಟ್‌ ಓರಿಯೆಂಟೆಡ್‌ ಸಿನಿಮಾಗಳು ಹೊಸ ಪ್ರೇಕ್ಷಕರನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಿವೆ. ಈಗಾಗಲೇ ಬಿಡುಗಡೆಯಾಗಿರುವ ಇಂಥ ಹಲವು ಸಿನಿಮಾಗಳಂತೆ ‘ದಾಮಾಯಣ’ ಕೂಡ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂದು ಈ ಚಿತ್ರದ ನಿರ್ದೇಶಕ, ನಟ ಶ್ರೀಮುಖ ಸುಳ್ಯ ತಿಳಿಸಿದ್ದಾರೆ. ಬೇರೆ ಬೇರೆ ಉದ್ಯೋಗ ಮಾಡಿ, ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಅನುಭವವಿರುವ ಅವರು ಇದೇ ಮೊದಲ ಬಾರಿಗೆ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

‘ನಮ್ಮ ದಾಮಾಯಣ ಸಿನಿಮಾ ಕಂಟೆಂಟ್‌ ಆಧರಿಸಿದೆ. ಇದರಲ್ಲಿ ನಾಯಕ, ನಾಯಕಿ ಇಲ್ಲ. ಪ್ರಮುಖ ಪಾತ್ರಧಾರಿಗಳಷ್ಟೇ ಇದ್ದಾರೆ. ಇದೊಂದು ಸಿಚುಯೇಶನಲ್‌ ಕಾಮಿಡಿ ಸಿನಿಮಾ. ಸಂದರ್ಭಗಳೇ ಪ್ರೇಕ್ಷಕರನ್ನು ನಗಿಸುತ್ತವೆ. ನನಗೆ ಸಿನಿಮಾ ಮಾಡಿದ ಅನುಭವವಿಲ್ಲ. ಆದರೆ ಕಿರುಚಿತ್ರಗಳಲ್ಲಿ ಹೆಚ್ಚಿನ ಅನುಭವ ಪಡೆದಿದ್ದೇನೆ. ಒಂದು ತಂಡ ಕಟ್ಟಿ, ಉತ್ತಮ ಸ್ಕ್ರಿಪ್ಟ್ ಬರೆದು, ನಂತರ ಅದೇ ತಂಡದೊಂದಿಗೆ ಸಂಪೂರ್ಣ ಸ್ಕ್ರಿಪ್ಟ್ ಬರೆದು, ಪಕ್ಕಾ ಪ್ಲ್ಯಾನ್‌ ಮಾಡಿ ಪೂರ್ಣ ತಯಾರಿಯೊಂದಿಗೆ ಈ ಸಿನಿಮಾ ಮಾಡಿದ್ದೇವೆ. ಹಾಗಾಗಿ ಈ ಸಿನಿಮಾ ನೋಡಿದ ಒಂದಷ್ಟು ಜನರು ಇದನ್ನು ಇಷ್ಟಪಟ್ಟಿದ್ದಾರೆ’ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು