ರಾಮನಗರ ; ಸಾಹಸ ಕಲಾವಿದ ರಾಕೇಶ್ ಲವ್ ಯು ರಚ್ಚು ಸಿನೆಮಾ ಸೂಟಿಂಗ್ ವೇಳೆ ಮೃತಪಟ್ಟ ಘಟನೆ ನಡೆದ ದಿನ ಪೊಲೀಸ್ಗೆ ದೂರು ಕೊಡ್ತೀವಿ ಎಂದು ಮೃತನ ಕುಟುಂಬಸ್ಥರು ಹೇಳಿದ್ದರು. ಆದರೆ ಇದುವರೆಗೂ ಕೊಟ್ಟಿಲ್ಲ.
ವಿವೇಕ್ರ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇಂದು(ಮಂಗಳವಾರ) ಸಂಜೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಈ ನಡುವೆ ತಲೆ ಮರೆಸಿಕೊಂಡಿರುವ ನಿರ್ಮಾಪಕ ಗುರುದೇಶಪಾಂಡೆ, ವಿವೇಕ್ರ ಚಿಕ್ಕಪ್ಪನಿಗೆ ಕರೆ ಮಾಡಿ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೊಡ್ತೀವಿ ಎಂದಿದ್ದಾರೆ.
ಕಾನ್ಫರೆನ್ಸ್ ಕಾಲ್ ಹಾಕಿ ವಿವೇಕ್ರ ಇಬ್ಬರೂ ಚಿಕ್ಕಪ್ಪಂದಿರೊಂದಿಗೆ ಮಾತನಾಡಿದ ಗುರುದೇಶಪಾಂಡೆ, 10 ಲಕ್ಷ ರೂಪಾಯಿ ನೆರವು ಕೊಡುವುದಾಗಿ ಹೇಳಿದ್ದಾರೆ ಎಂದು ಮೃತನ ಚಿಕ್ಕಪ್ಪ ತಿಳಿಸಿದ್ದಾರೆ.ಈ ಘಟನೆಗೆ ಕ್ರೇನ್ ಆಪರೇಟರ್ದ್ದೇ ತಪ್ಪು. ಗುರುದೇಶಪಾಂಡೆ ಅವರು 10 ಲಕ್ಷ ರೂ. ಪರಿಹಾರ ಕೊಡ್ತೀನಿ ಅಂದಿದ್ದಾರೆ ಎಂದು ವಿವೇಕ್ರ ಚಿಕ್ಕಮ್ಮ ರಾಜಮಾಣಿಕಂ ಹೇಳಿದ್ದಾರೆ.
‘ಲವ್ ಯು ರಚ್ಚು’ ಸಿನಿಮಾ ಶೂಟಿಂಗ್ ವೇಳೆ ನಡೆದ ದುರಂತ ಕುರಿತು ಪ್ರತಿಕ್ರಿಯಿಸಿದ ರಾಮನಗರ ಎಸ್ಪಿ ಎಸ್.ಗಿರೀಶ್, ನಿರ್ಮಾಪಕ ಸ್ಥಳದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಜಮೀನು ಮಾಲೀಕ ರೈತ, ಆತನಿಗೆ ಏನು ವಿಷಯ ಗೊತ್ತಿರಲ್ಲಿಲ್ಲ. ಆದರೆ, ಚಿತ್ತೀಕರಣಕ್ಕೆ ಅನುಮತಿ ಪಡೆಯಬೇಕಿತ್ತು. ನಿರ್ದೇಶಕ ಕೂಡ ಅನುಮತಿ ಪಡೆಯಬೇಕಿತ್ತು, ಪಡೆದಿಲ್ಲ. ನಿನ್ನೆ ತಡರಾತ್ರಿವರೆಗೆ ಮೃತರ ಪೋಷಕರು ದೂರು ಕೊಡಲು ಮುಂದಾಗಲಿಲ್ಲ. ಕಾಂಪ್ರಮೈಸ್ ಆಗುವ ಸೂಚನೆಯಿತ್ತು, ಹಾಗಾಗಿ ಸುಮೊಟೋ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ ಎಂದರು.
ಸಾಹಸ ಕಲಾವಿದ ಸಾವು : ಕುಟುಂಬದೊಂದಿಗೆ ಕಾಂಪ್ರೊಮೈಸ್ ಮಾಡಿಕೊಂಡ ನಿರ್ಮಾಪಕ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.