News Karnataka Kannada
Thursday, May 09 2024
ಸಾಂಡಲ್ ವುಡ್

25 ಕೋಟಿ ರೂ ನಕಲಿ ಶೂರಿಟಿ ಪ್ರಕರಣಕ್ಕೆ ತೆರೆ ಎಳೆದ ದರ್ಶನ್‌

Darshan Bangalore 13 7 21
Photo Credit :

ಬೆಂಗಳೂರು: ಕಳೆದ ಮೂರು ದಿನಗಳಿಂದ ನಡೆಯುತಿದ್ದ 25 ಕೋಟಿ ರೂಪಾಯಿಯ ಸಾಲದ ನಕಲಿ ಶೂರಿಟಿ ಪ್ರಕರಣಕ್ಕೆ ಕೊನೆಗೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೆರೆ ಎಳೆದಿದ್ದಾರೆ. ನಟ ದರ್ಶನ್ ಹೆಸರಲ್ಲಿ ಹಣ ವಂಚನೆ ಯತ್ನ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಆರಂಭದಲ್ಲಿ ನಿರ್ಮಾಪಕ ಉಮಾಪತಿ ಮೇಲೆ ಅನುಮಾನ ಮೂಡಿತ್ತಾದರೂ ನಂತರದ ಬೆಳವಣಿಗೆಯಲ್ಲಿ ಈ ಪ್ರಕರಣದ ಪ್ರಮುಖ ಕೇಂದ್ರಬಿಂದು ಆರೋಪಿ ಅರುಣಾಕುಮಾರಿ ಎನ್ನಲಾಗುತ್ತಿದೆ. ಇದೀಗ ನಟ ದರ್ಶನ್​ ಕೂಡ ‘ಈ ಕೇಸ್​ಗೆ ಈಗಾಗಲೇ ಮಂಗಳ ಹಾಡಿ ಆಗಿದೆ’ ಎನ್ನುವ ಮೂಲಕ ನಿರ್ಮಾಪಕ ಉಮಾಪತಿಯನ್ನು ಬಿಟ್ಟುಕೊಟ್ಟಿಲ್ಲ.
‘ನಿರ್ಮಾಪಕರನ್ನು ನಾನು ಬಿಟ್ಟು ಕೊಡುವುದಿಲ್ಲ. ಉಮಾಪತಿ ಇವತ್ತಿಗೂ ನಮ್ಮ ನಿರ್ಮಾಪಕರೇ. ನಾನು ಉಮಾಪತಿ ಜತೆ ಮಾತನಾಡಿದ್ದೇನೆ. ಇದೇನು ಮಕ್ಕಳ ಆಟವಲ್ಲ…’ ಎನ್ನುವ ಮೂಲಕ ಉಮಾಪತಿ ಪರ ದರ್ಶನ್​ ಮಾತನಾಡಿದ್ದಾರೆ.‘ಇದರಲ್ಲಿ ನಿರ್ಮಾಪಕ ಉಮಾಪತಿಯ ಪಾತ್ರ ಏನೂ ಇಲ್ಲ. ಇದರ ಹಿಂದೆ ಬೇರೆ ಯಾರೋ ಇದ್ದಾರೆ. ಯಾವ ಹೆಣ್ಣು ಮಕ್ಕಳೂ ಇಂಥ ಕೆಲಸ ಮಾಡಲು ಬರಲ್ಲ. ಉಮಾಪತಿಯನ್ನು ಏಕೆ ಟಾರ್ಗೆಟ್ ಮಾಡುತ್ತೀರಿ. ಈ ವಿಷಯದಲ್ಲಿ ಇಲ್ಲಿ ಯಾರೂ ಕೈ ಕಟ್ಟಿ ಕೂತಿಲ್ಲ. ಆ ಮಹಿಳೆಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು?’ ಎಂದು ಪ್ರಶ್ನಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು