ಬೆಂಗಳೂರು: ಕಳೆದ ಮೂರು ದಿನಗಳಿಂದ ನಡೆಯುತಿದ್ದ 25 ಕೋಟಿ ರೂಪಾಯಿಯ ಸಾಲದ ನಕಲಿ ಶೂರಿಟಿ ಪ್ರಕರಣಕ್ಕೆ ಕೊನೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆ ಎಳೆದಿದ್ದಾರೆ. ನಟ ದರ್ಶನ್ ಹೆಸರಲ್ಲಿ ಹಣ ವಂಚನೆ ಯತ್ನ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಆರಂಭದಲ್ಲಿ ನಿರ್ಮಾಪಕ ಉಮಾಪತಿ ಮೇಲೆ ಅನುಮಾನ ಮೂಡಿತ್ತಾದರೂ ನಂತರದ ಬೆಳವಣಿಗೆಯಲ್ಲಿ ಈ ಪ್ರಕರಣದ ಪ್ರಮುಖ ಕೇಂದ್ರಬಿಂದು ಆರೋಪಿ ಅರುಣಾಕುಮಾರಿ ಎನ್ನಲಾಗುತ್ತಿದೆ. ಇದೀಗ ನಟ ದರ್ಶನ್ ಕೂಡ ‘ಈ ಕೇಸ್ಗೆ ಈಗಾಗಲೇ ಮಂಗಳ ಹಾಡಿ ಆಗಿದೆ’ ಎನ್ನುವ ಮೂಲಕ ನಿರ್ಮಾಪಕ ಉಮಾಪತಿಯನ್ನು ಬಿಟ್ಟುಕೊಟ್ಟಿಲ್ಲ.
‘ನಿರ್ಮಾಪಕರನ್ನು ನಾನು ಬಿಟ್ಟು ಕೊಡುವುದಿಲ್ಲ. ಉಮಾಪತಿ ಇವತ್ತಿಗೂ ನಮ್ಮ ನಿರ್ಮಾಪಕರೇ. ನಾನು ಉಮಾಪತಿ ಜತೆ ಮಾತನಾಡಿದ್ದೇನೆ. ಇದೇನು ಮಕ್ಕಳ ಆಟವಲ್ಲ…’ ಎನ್ನುವ ಮೂಲಕ ಉಮಾಪತಿ ಪರ ದರ್ಶನ್ ಮಾತನಾಡಿದ್ದಾರೆ.‘ಇದರಲ್ಲಿ ನಿರ್ಮಾಪಕ ಉಮಾಪತಿಯ ಪಾತ್ರ ಏನೂ ಇಲ್ಲ. ಇದರ ಹಿಂದೆ ಬೇರೆ ಯಾರೋ ಇದ್ದಾರೆ. ಯಾವ ಹೆಣ್ಣು ಮಕ್ಕಳೂ ಇಂಥ ಕೆಲಸ ಮಾಡಲು ಬರಲ್ಲ. ಉಮಾಪತಿಯನ್ನು ಏಕೆ ಟಾರ್ಗೆಟ್ ಮಾಡುತ್ತೀರಿ. ಈ ವಿಷಯದಲ್ಲಿ ಇಲ್ಲಿ ಯಾರೂ ಕೈ ಕಟ್ಟಿ ಕೂತಿಲ್ಲ. ಆ ಮಹಿಳೆಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು?’ ಎಂದು ಪ್ರಶ್ನಿಸಿದರು.
25 ಕೋಟಿ ರೂ ನಕಲಿ ಶೂರಿಟಿ ಪ್ರಕರಣಕ್ಕೆ ತೆರೆ ಎಳೆದ ದರ್ಶನ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.