ಕಡಲ ತೀರದ ಭಾರ್ಗವ..ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಗೆ ಸಜ್ಜಾಗುತ್ತಿರುವ ಹೊಸಬರ ಪ್ರಯೋಗಾತ್ಮಕ ಸಿನಿಮಾ. ಟೈಟಲ್ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಈ ಚಿತ್ರ ಈಗ ಟೀಸರ್ ಮೂಲಕ ಎಲ್ಲರ ಗಮನ ಸೆಳೆಯಲು ಮುಂದಾಗಿದೆ. ಚಿತ್ರದ ಬಹು ನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗಿ ಸಿನಿರಸಿಕರನ್ನು ಕಾಡಲು ಶುರುವಿಟ್ಟಿದೆ.
ವಿಭಿನ್ನ ಕಥಾಹಂದರ, ಅಷ್ಟೇ ವಿಭಿನ್ನ ನಿರೂಪಣೆ ಹೊಂದಿರುವ ಕಡಲ ತೀರದ ಭಾರ್ಗವ ಟೀಸರ್ ಚಿತ್ರಪ್ರೇಮಿಗಳ ಮನಸೂರೆಗೊಂಡಿದೆ. ಪ್ರೀತಿ, ನೋವು, ಕೋಪ, ಹತಾಶೆ ಜೊತೆ ಒಂದಿಷ್ಟು ಚೆಂದದ ಸಾಲುಗಳು ಟೀಸರ್ ನಲ್ಲಿ ನಿಮ್ಮನ್ನು ಕಾಡದೇ ಬಿಡದು. ಪನ್ನಗ ಸೋಮಸೇಖರ್ ಈ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಇವರದ್ದೆ.
ಭರತ್ ಗೌಡ ಹಾಗೂ ವರುಣ್ ರಾಜು ಪಟೇಲ್ ಚಿತ್ರದಲ್ಲಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾರಂಗ ಇವರಿಗೆ ಹೊಸತು. ಟೀಸರ್ ನೋಡಿದ ಮೇಲೆ ಸಿನಿಮಾ ಮೇಲಿನ ಇವರ ಪ್ಯಾಶನ್ ಎಷ್ಟಿದೆ ಎಂದು ಅರಿವಾಗದೇ ಇರಲಾರದು. ಕೇವಲ ನಟನೆ ಮಾತ್ರವಲ್ಲ ಈ ಇಬ್ಬರೂ ಚಿತ್ರಕ್ಕೆ ಬಂಡವಾಳ ಹಾಕಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ಇವಕಲ ಸ್ಟುಡಿಯೋ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ಬಿಗ್ ಬಾಸ್ ಖ್ಯಾತಿಯ ನಟಿ ಶ್ರುತಿ ಪ್ರಕಾಶ್ ನಾಯಕಿಯಾಗಿ ತೆರೆ ಹಂಚಿಕೊAಡಿದ್ದಾರೆ.
ಕೀರ್ತನ್ ಪೂಜಾರ್ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ಸೆರೆಯಾಗಿದ್ದು, ಬೆಂಗಳೂರು, ಉಡುಪಿ, ಭಟ್ಕಳ, ಮುರುಡೇಶ್ವರದ ಕಡಲ ತೀರ ಒಳಗೊಂಡAತೆ ಹಲವು ಕಡೆ ಚಿತ್ರೀಕರಣ ನಡೆಸಲಾಗಿದೆ. ಅನಿಲ್ ಸಿ.ಜೆ ಸಂಗೀತ ನಿರ್ದೇಶನ, ಆಶಿಕ್ ಕುಸುಗೊಳ್, ಉಮೇಶ್ ಸಂಕಲನ ಚಿತ್ರಕ್ಕಿದೆ. ರಾಘವ್ ನಾಗ್, ಶ್ರೀಧರ್ , ಅಶ್ವಿನ್ ಹಾಸನ್ ಒಳಗೊಂಡ ತಾರಬಳಗ ಚಿತ್ರದಲ್ಲಿದೆ.