ಬ್ರಹ್ಮಚಾರಿ ಸಿನೆಮಾದಲ್ಲಿ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ್ ಜೋಡಿ ಈಗ ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಮ್ಯಾಟ್ನಿ ಚಿತ್ರದ ಮೂಲಕ ಮತ್ತೆ ಈ ಜೋಡಿ ಒಂದಾಗಲಿದ್ದು, ಈಗಾಗಲೇ ಶೂಟಿಂಗ್ ಆರಂಭವಾಗಿದೆ.
ಆದರೆ ಈ ಹಿಂದೆ ಮ್ಯಾಟ್ನಿ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಎಂದು ಘೋಷಣೆಯಾಗಿತ್ತು, ಆದರೆ ಅದಿತಿ ಕೂಡ ಈ ಚಿತ್ರಕ್ಕೆ ಎಂಟ್ರಿ ಕೊಡುತ್ತಿರುವುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಮ್ಯಾಟ್ನಿ ಚಿತ್ರದಲ್ಲಿ ಇಬ್ಬರು ನಾಯಕಿಯರಿರಬಹುದು ಎಂಬ ಗುಸುಗುಸು ಶುರುವಾಗಿದೆ.
ಈ ಬಗ್ಗೆ ನಿರ್ದೇಶಕ ಮನೋಹರ್ ಕಾಂಪಲ್ಲಿ ಮಾತನಾಡಿದ್ದು, ಈ ಚಿತ್ರದಲ್ಲಿ ಅದಿತಿ ಮತ್ತು ರಚಿತಾ ಇಬ್ಬರ ಪಾತ್ರವೂ ಬಹಳ ಮುಖ್ಯ. ಅದಿತಿಯದು ಮೇಜರ್ ಕ್ಯಾರೆಕ್ಟರ್, ರಚಿತಾರದು ಕಥೆಗೆ ಇಂಪಾರ್ಟೆಂಟ್ ಕ್ಯಾರೆಕ್ಟರ್ ಎಂದು ಹೇಳಿದ್ದಾರೆ. ಈಗಾಗಲೇ ಶೂಟಿಂಗ್ ಅರ್ಧದಷ್ಟು ಮುಕ್ತಾಯವಾಗಿದೆ.