ಕೆಲವು ಸಿನಿಮಾ ಥಿಯೇಟರ್ಗಳಲ್ಲಿ ತಾಂತ್ರಿಕ ದೋಷದಿಂದ ಕೋಟಿಗೊಬ್ಬ-3 ಸಿನಿಮಾ ಪ್ರದರ್ಶನ ಕಂಡಿಲ್ಲ. ನಿನ್ನೆ ಬೆಳಗ್ಗೆಯೇ ಥಿಯೇಟರ್ಗಳ ಮುಂದೆ ಜಮಾಯಿಸಿದ್ದ ಅಭಿಮಾನಿಗಳಿಗೆ ಕೋಟಿಗೊಬ್ಬನ ದರ್ಶನ ಸಿಗದೇ ಬೇಸರಿಸಿಕೊಂಡಿದ್ದಾರೆ.
ಕೆಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರಮಂದಿರ ಆಡಳಿತ ಮಂಡಳಿಯವರ ಜೊತೆ ವಾಗ್ವಾದಕ್ಕಿಳಿದಿದ್ದಾರೆ.
ಈ ಬೆಳವಣಿಗೆ ಗಮನಿಸಿದ ಕಿಚ್ಚ ಸುದೀಪ ಪರಿಸ್ಥಿತಿ ನಿಭಾಯಿಸಲು ಟ್ವೀಟ್ ಒಂದನ್ನು ಮಾಡಿದ್ದಾರೆ.
ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗಿಲ್ಲ. ಚಿತ್ರಮಂದಿರಗಳ ಬಳಿ ಸಿನಿಮಾ ಇದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ತೋರಿಸಲು ಆಗುತ್ತಿಲ್ಲ. ಕೆಲವರ ಬೇಜವಾಬ್ದಾರಿಯಿಂದ ಈ ರೀತಿ ಆಗುತ್ತಿದೆ. ಇಂದಿನ ಎಲ್ಲ ಶೋಗಳು ರದ್ದಾಗಿದೆ. ನಾಳೆ ಸಿನಿಮಾ ರಿಲೀಸ್ ಆಗಲಿದೆ.
ನಾನು ಇದಕ್ಕೆ ಕ್ಷಮೆ ಕೇಳುತ್ತೇನೆ. ನಾನು ಕೂಡ ನಿಮ್ಮಂತೆಯೇ ಎಕ್ಸೈಟ್ ಆಗಿದ್ದೆ. ಅದು ಇಷ್ಟು ದೊಡ್ಡ ಗ್ಯಾಪ್ ನಂತರ ನಾವೆಲ್ಲಾ ಸಿನಿಮಾ ನೋಡಲು ಕುಳಿತಿದ್ದೇವೆ. ನನ್ನ ಸಿನಿಮಾ ನೋಡಿ ನೀವು ಖುಷಿಪಡುವುದನ್ನು ನಾನು ನೋಡಬೇಕಿತ್ತು. ಕ್ಷಮೆ ಇರಲಿ. ಮುಂದಿನ ಬದಲಾವಣೆಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕ ತಕ್ಷಣ ಮತ್ತೆ ನಿಮ್ಮ ಮುಂದೆ ಹಾಜರಾಗುತ್ತೇನೆ. ಚಿತ್ರಮಂದಿರಗಳಲ್ಲಿ ಯಾವುದೇ ರೀತಿ ಗಲಾಟೆ ಆಗುವುದು ಬೇಡ. ಥಿಯೇಟರ್ ಪ್ರಾಪರ್ಟಿಗಳಿಗೂ ಹಾನಿ ಮಾಡಬೇಡಿ ಎಂದು ಹೇಳಿದ್ದಾರೆ.