News Karnataka Kannada
Sunday, May 19 2024
ವಿಶೇಷ

ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ‘ಚೂಡಾಮಣಿ’ ಯಕ್ಷಗಾನ ತಾಳಮದ್ದಳೆ

'Chudamani' Yakshagana Talamaddale won the appreciation of the audience
Photo Credit : News Kannada

ತುಮಕೂರು: ಶ್ರಾವಣಮಾಸದ ಪ್ರಯುಕ್ತ ಹನುಮಂತಪುರದ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ‘ಯಕ್ಷದೀವಿಗೆ’ ವತಿಯಿಂದ ಪ್ರದರ್ಶಿಸಲಾದ ‘ಚೂಡಾಮಣಿ’ ಯಕ್ಷಗಾನ ತಾಳಮದ್ದಳೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಆಂಜನೇಯನ ಶಕ್ತಿ-ಸಾಮರ್ಥ್ಯ, ಚಾತುರ್ಯ, ಕಾರ್ಯತತ್ಪರತೆ, ನಿರ್ವಹಣಾ ಕೌಶಲ್ಯಗಳನ್ನು ಪ್ರತಿಬಿಂಬಿಸುವ ರಾಮಾಯಣದ ಕಥಾಭಾಗವು ಆಂಜನೇಯ ಸನ್ನಿಧಿಯಲ್ಲಿ ಪ್ರದರ್ಶನಗೊಂಡದ್ದು ಅರ್ಥಪೂರ್ಣವೆನಿಸಿತು.

ಸುಗ್ರೀವನ ಆಜ್ಞೆಯ ಮೇರೆಗೆ ಆಂಜನೇಯನು ಸೀತೆಯನ್ನು ಹುಡುಕುತ್ತಾ ಲಂಕಾನಗರವನ್ನು ಪ್ರವೇಶಿಸಿ, ತನ್ನ ದಾರಿಗೆ ಅಡ್ಡಿಯಾದ ಲಂಕಿಣಿಯನ್ನು ನಿವಾರಿಸಿ, ಅಶೋಕವನದಲ್ಲಿ ಸೀತೆಯನ್ನು ಭೇಟಿಯಾಗಿ ರಾಮನ ಮುದ್ರೆಯುಂಗುರವನ್ನು ಕೊಟ್ಟು ಸಮಾಧಾನ ಹೇಳಿ, ಭೇಟಿಯ ಸಂಕೇತವಾಗಿ ಚೂಡಾಮಣಿಯನ್ನು ಒಯ್ಯುವ ಕಥಾನಕವನ್ನು ಕರಾವಳಿಯ ಪ್ರಸಿದ್ಧ ಕಲಾವಿದರು ಯಕ್ಷಗಾನ ತಾಳಮದ್ದಳೆಯ ಮೂಲಕ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದರು.

ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತೂರು ರಮೇಶ್ ಭಟ್, ಚೆಂಡೆಯಲ್ಲಿ ಪಿ. ಜಿ. ಜಗನ್ನಿವಾಸರಾವ್ ಪುತ್ತೂರು, ಮದ್ದಳೆಯಲ್ಲಿ ಅವಿನಾಶ್ ಬೈಪಾಡಿತ್ತಾಯ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್ (ಹನೂಮಂತ), ಶಶಾಂಕ ಅರ್ನಾಡಿ (ರಾವಣ), ಆರತಿ ಪಟ್ರಮೆ (ಲಂಕಿಣಿ), ಸಿಬಂತಿ ಪದ್ಮನಾಭ (ಸೀತೆ) ಹಾಗೂ ಸಂವೃತ ಶರ್ಮಾ (ತ್ರಿಜಟೆ) ಭಾಗವಹಿಸಿದರು.

ಇದಕ್ಕೂ ಮುನ್ನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬಿ.ಟೆಕ್ (ಜೈವಿಕ ತಂತ್ರಜ್ಞಾನ) ವಿದ್ಯಾರ್ಥಿನಿ ಮಹಿಮಾ ಭಟ್ ಸರ್ಪಂಗಳ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯೋಲಿನ್‌ನಲ್ಲಿ ವಿದ್ವಾನ್ ಪಿ.ಎಸ್. ಪ್ರಸನ್ನ ಕುಮಾರ್, ಮೃದಂಗದಲ್ಲಿ ವಿದ್ವಾನ್ ಅಂಜನ್ ಕುಮಾರ್ ಎಸ್., ಘಟಂನಲ್ಲಿ ಅವಿನಾಶ್ ಬೈಪಾಡಿತ್ತಾಯ ಸಹಕರಿಸಿದರು.

ಬಯಲಾಂಜನೇಯ ದೇವಸ್ಥಾನದ ಮಹೇಶ್, ದ.ಕ. ಮಿತ್ರವೃಂದದ ಅಧ್ಯಕ್ಷ ಅಮರನಾಥ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ್ ಎಂ.ಎಸ್., ಸಂಘಟನಾ ಕಾರ್ಯದರ್ಶಿ ಜಯ ಪೂಜಾರಿ, ಯಕ್ಷಗಾನ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಸಂಚಾಲಕ ಅನಂತ ರಾವ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು