ಕರಿಬೇವಿನ ಸತ್ಯವು ಅದರ ಔಷಧೀಯ ಮೌಲ್ಯ ಮತ್ತು ವಿಶೇಷ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಈ ಸಸ್ಯವನ್ನ ಭಾರತದಾದ್ಯಂತ ಉಷ್ಣವಲಯದ ಮತ್ತು ಉಪೋಷ್ಣವಲಯದ ವಲಯಗಳಲ್ಲಿ ಬೆಳೆಯಲಾಗುತ್ತದೆ. ಹಾಗೂ ಈ ಸಸ್ಯವನ್ನು ಪೊದೆ ಸಸ್ಯ ಎಂದು ಕೂಡ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಈ ಗಿಡಗಳು ಪಾಳು ಭೂಮಿ ಹಾಗೂ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆದರೆ ಶ್ರೀಲಂಕಾ, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಇವುಗಳನ್ನು ಬೆಳೆಸಲಾಗುತ್ತದೆ.
ಕರಿಬೇವಿನ ಗಿಡಗಳು ಇತ್ತೀಚಿಗೆ ವಾಣಿಜ್ಯ ಬೆಳೆಯಾಗಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಈ ಗಿಡಗಳನ್ನು ತಮಿಳುನಾಡು ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹೆಚ್ಚಾಗಿ ಕರಿಬೇವಿನ ಗಿಡಗಳನ್ನು ಇತರ ಬಹುವಾರ್ಷಿಕ ಬೆಳೆಗಳ ನಡುವೆ ಅಂತರ ಬೆಳೆಯಾಗಿ ಬೆಳೆಯಬಹುದಾಗಿದೆ.
ಕರಿಬೇವಿನ ಗಿಡವನ್ನು ಮರದ ತೆಳ್ಳಗಿನ ಕೊಂಬೆಗಳನ್ನು ಹೊಂದಿರುವ ಪರಿಮಳಯುಕ್ತ ಬುದ್ಧಿಶಕ್ತಿ ಎಂದು ವರ್ಗೀಕರಿಸಬಹುದಾಗಿದೆ. ಈ ಸಸ್ಯದ ಪ್ರಮುಖ ಭಾಗವೆಂದರೆ ಅದು ಎಲೆಗಳು. ಸುವಾಸನೆಯುಕ್ತವಾಗಿರುವ ಈ ಎಲೆಗಳು ಭಾರತದ ಅತ್ಯಂತ ಅಡುಗೆಯಲ್ಲಿ ಬಹಳ ಹೆಚ್ಚಾಗಿ ಬಳಸುತ್ತಾರೆ. ಅಡುಗೆಯ ಜೊತೆಗೆ ಇವುಗಳಲ್ಲಿ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು ಪ್ರೋಟಿನ್ ಕಾರ್ಬೋಹೈಡ್ರೈಟ್ ಕ್ಯಾಲ್ಸಿಯಂ ಕಬ್ಬಿಣ ಬೀಟಾ ಕ್ಯಾರೋಟಿನ್ ಮುಂತಾದ ಉಪಯುಕ್ತ ಪೋಷಕಾಂಶಗಳನ್ನು ಹೊಂದಿದೆ.
ಬೆಳೆಯಲು ಬೇಕಾದ ಮಣ್ಣು ಮತ್ತು ಹವಾಮಾನ : ಕರಿಬೇವಿನ ಎಲೆಗಳ ಕೃಷಿಗೆ ಅಗತ್ಯವಿರುವ ಯಾವುದೇ ವಿಶೇಷ ಹವಾಮಾನ ಪರಿಸ್ಥಿತಿಗಳಿಲ್ಲ. ಅವುಗಳು ಸಿಷ್ಠ ವಾತಾವರಣದಲ್ಲಿ ಸಹ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ. ಕರಿಬೇವಿನ ಬೆಳೆಗೆ ಸೂಕ್ತವಾದ ತಾಪಮಾನ ವ್ಯಾಪ್ತಿಯು ಸುಮಾರು 16 ಡಿಗ್ರಿ ಸೆಲ್ಸಿಯಸ್ ನಿಂದ 37°c ಆಗಿದೆ.
ಇದಕ್ಕೆ ಮಣ್ಣು ಕೆಂಪು ಮರಳು ಮಿಶ್ರಿತಲ್ಲೋ ಮಣ್ಣು ಅದರ ಕೃಷಿಗೆ ಸೂಕ್ತವಾಗಿದೆ . ಹಾಗೆ ಉತ್ತಮ ಬೆಳಕಿನ ರಚನೆಯ ಮಣ್ಣು ಸತ್ಯಕ್ಕೆ ಸೂಕ್ತವಾಗಿದೆ.
ಕರಿಬೇವಿನ ಆರೋಗ್ಯ ಪ್ರಯೋಜನಗಳು : ಭಾರತೀಯ ಅಡುಗೆಯಲ್ಲಿ ಕರಿಬೇವು ಬಳಸದೆ ಮಾಡುವಂತಹ ಅಡುಗೆಗಳು ಅತಿ ವಿರಳ. ಆಹಾರಕ್ಕೆ ರುಚಿಯನ್ನು ಕೊಡುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮ ಎಂದು ಸಾಬೀತಾಗಿರುವ ಈ ಕರಿಬೇವಿನ ಆರೋಗ್ಯ ಪ್ರಯೋಜನಗಳು ಹೀಗಿವೆ
# ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ
# ಮಾರ್ನಿಂಗ್ ಸಿಕ್ಕ ನೆಸ್ ಕಡಿಮೆ ಮಾಡುತ್ತದೆ
# ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ
# ಮಧುಮೇಹಕ್ಕೆ ಉತ್ತಮ
# ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ
# ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
# ಕ್ಯಾಲ್ಸಿಯಂ ಕೊರತೆ ನಿವಾರಿಸುತ್ತದೆ
# ತೂಕನಷ್ಟಕ್ಕೆ ಸಹಕಾರಿಯಾಗಿದೆ