Categories: ಅಂಕಣ

ಕೆಸುವಿನ ಗೆಡ್ಡೆಯಲ್ಲಿದೆ ಅದ್ಭುತ ಪೌಷ್ಟಿಕಾಂಶ ಗುಣಗಳು

ಕೆಸುವನ್ನು ಕಂಡರಿಯದವರು ಯಾರು ಇಲ್ಲ. ಮಳೆಗಾಲದಲ್ಲಿ ಸೊಂಪ್ಪಾಗಿ ನೀರಿನ ತೇವಾಂಶ ಇರುವಲ್ಲಿ, ಕೆಸರು ಇರುವಲ್ಲಿ ವಿಶಾಲವಾಗಿ ಹರಡಿಕೊಂಡು ಬೆಳೆಯುತ್ತವೆ. ಸಾಮನ್ಯವಾಗಿ ಎಲೆಯ ಪತ್ರೋಡೆ, ದಂಟನ್ನು ಅರಿವೆ ಜೊತೆ ಪಲ್ಯ, ಸಾರು ಹೀಗೆ ವಿಭಿನ್ನ ಖಾದ್ಯಗಳನ್ನು ಮಾಡಲಾಗುವುದು.ಆದರೆ ಕೆಸುವಿನ ಗೆಡ್ಡೆಯಿಂದ ತಯಾರಾಗುವ ಆಹಾರಗಳು ರುಚಿಕರವಾಗಿರುತ್ತದೆ.

ಕೆಸುವಿನ ಗೆಡ್ಡೆಯ ಫ್ರೈ , ಕೆಸುವಿನನ ಗೆಡ್ಡೆಯ ಗೊಜ್ಜು, ಕೆಸುವಿನ ಗೆಡ್ಡೆಯ ಪುಳಿಮುಂಚಿ ಮತ್ತು ಪಲ್ಯ, ಸಾರು ಉತ್ತಮ ಸ್ವಧಿಷ್ಟಭರಿತವಾಗಿರುವ ಆಹಾರವಾಗಿದೆ. ಹಳ್ಳಿಗಳಲ್ಲಿನ ಹೆಚ್ಚಾಗಿ ಇದು ಸುಲಭವಾಗಿ ಸಿಗುವಂತಹ ಕೆಸುವಿನ ಗೆಡ್ಡೆಯನ್ನು ಆಹಾರವಾಗಿ ಬೆಳೆಸಲಾಗುತ್ತದೆ. ಆದರೆ ಪಟ್ಟಣಗಳಲ್ಲಿ ಇದನ್ನು ತರಕಾರಿ ಮಾರುಕಟ್ಟೆಯಲ್ಲಿ ದುಬಾರಿ ದುಡ್ಡುಕೊಟ್ಟು ತೆಗೆದುಕೊಳ್ಳ ಬೇಕಾಗುತ್ತದೆ. ಹಳ್ಳಿಗಳಲ್ಲಿ ಹೆಚ್ಚಾಗಿ ಜನರು ತಮ್ಮ ಮನೆಯ ಹಿತ್ತಲಲ್ಲಿ ಅಥಾವಾ ಮನೆಯ ಮುಂಭಾಗದಲ್ಲಿ ಖಾಲಿ ಜಾಗಗಳಲ್ಲಿ ಇದನ್ನು ಬೆಳೆಸುತ್ತಾರೆ. ಕೆಸುವಿನ ನೈಸರ್ಗಿಕ ಗುಣಲಕ್ಷಣದಂತೆ ಇದರ ಸಿಪ್ಪೆ ಸುಳಿದಾಗ ಕೈ ತುರಿಸುವುದು ಗ್ಯಾರಂಟಿ.ಆದರೆ ಬೇಯಿಸಿದಾಗ ಆಲೂಗಡ್ಡೆ, ಗೆಣಸಿನಂತೆ ಮೆತ್ತಗಾಗುತ್ತದೆ.

ಕೆಸುವಿನ ಗೆಡ್ಡೆಯು ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ನಾರಿನಂಶ ಹಾಗೂ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿ ಅಡಕವಾಗಿದೆ.
ಆಫ್ರೀಕ, ಕರಾವಳಿ ಪ್ರದೇಶ, ದಕ್ಷಿಣ ಏಷ್ಯಗಳ ಆಹಾರ ಸಂಸ್ಕೃತಿಯಲ್ಲಿ ಕಾಣಬಹುದಾಗಿದೆ. ಭಾರತದಲ್ಲಿ ಅದರಲ್ಲೂ ದಕ್ಷಿಣ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಸುಭವಾಗಿ ಸಿಗುವ ಈ ಕೆಸುವಿನ ಗೆಡ್ಡೆಯಲ್ಲಿ ವಿಟಮಿನ್ ಬಿ೬, ವಿಟಮಿನ್ ಇ, ಪೊಟ್ಯಾಸಿಯಂ, ತಾಮ್ರ, ರಂಜಕ, ಮೆಗ್ನಷಿಯಂ, ವಿಟಮಿನ್ ಇ, ಮತ್ತು ೩೦% ರಷ್ಟು ಮ್ಯಾಂಗನೀಸ್ ಮತ್ತ ನಾರಿನಂಶವನ್ನು ಒಳಗೊಂಡಿದೆ. ಇದರಲ್ಲಿರುವ ಕಾರ್ಬೋಹೈಡ್ರೇಟ್ಸ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ನಾರಿನಂಶದ ಆಹಾರಗಳು ಹೃದಯ ಸ್ನೇಹಿ ಎನ್ನಬಹುದು. ಆದ್ದರಿಂದಲೇ ಕೆಸುವಿನ ಗೆಡ್ಡೆಯು ಹೃದಯ ಸಂಬಂಧಿ ಕಾಯಿಲೆಯ ಆಪಾಯವನ್ನು ಕಡಿಮೆ ಮಾಡುತ್ತದೆ.ತೂಕ ಇಳಿಸಿಕೋಳ್ಳಲು ಉಪಯುಕ್ತವಾಗಿದೆ. ಒಟ್ಟಿನಲ್ಲಿ ಅಗ್ಗದಲ್ಲಿ ಮನೆಯ ಹಿತ್ತಲಲ್ಲಿ ಸಿಗುವ ಸೊಪ್ಪು ತರಕಾರಿಗಳಲ್ಲಿ ಇರುವ ಆರೋಗ್ಯವು ದುಬಾರಿ ರೆಡಿಮೆಡ್ ಫುಡ್‌ಗಳಲ್ಲಿ ಸಿಗಲಾರದು.

Ashika S

Recent Posts

ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿಯ ದುರಂತ ಅಂತ್ಯ

ತೆಲುಗು ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ ಬಹಳಷ್ಟು ಕನ್ನಡಿಗರು ಸಕ್ಸಸ್ ಕಂಡಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕರ್ನಾಟಕದ ಕಲಾವಿದರಿಗೆ ಸಾಕಷ್ಟು ಬೇಡಿಕೆಯೂ…

6 mins ago

ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರೋದೇ ಡೌಟ್; ರಿಟರ್ನ್‌ ಟಿಕೆಟ್‌ ಕ್ಯಾನ್ಸಲ್

ಹಾಸನದ ಅಶ್ಲೀಲ ವಿಡಿಯೋ ವೈರಲ್ ಹಾಗೂ ಪೆನ್‌ಡ್ರೈವ್‌ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ. ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ…

31 mins ago

ರಾಧಾ ರಮಣ ಧಾರವಾಹಿಯ ಜನಪ್ರಿಯ ನಟಿ ಪವಿತ್ರ ಜಯರಾಂ ನಿಧನ

ಕನ್ನಡದ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ ಪವಿತ್ರ ಜಯರಾಂ ಅವರು ನಿಧನರಾಗಿದ್ದಾರೆ.

49 mins ago

ಹಣ್ಣಕ್ಕೆ ಬೇಡಿಕೆ ಇಟ್ಟು ಮರ್ಮಾಂಗಕ್ಕೆ ವಿದ್ಯುತ್​ ಶಾಕ್​ ನೀಡಿ ಚಿತ್ರಹಿಂಸೆ

ಹಣಕ್ಕಾಗಿ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮಾಡಿ ಘನಘೋರವಾಗಿ ಚಿತ್ರಹಿಂಸೆ ನೀಡಿರುವ ಘಟನೆ…

1 hour ago

ಮಾಜಿ ಸಿಎಂ ಎಚ್​ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ: ಕಾಂಗ್ರೆಸ್​ ಶಾಸಕ

ಹೆಚ್​ಡಿ ರೇವಣ್ಣರಂತೆ ಮಾಜಿ ಸಿಎಂ ಹೆಚ್​ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ. ಅವರ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಅವರು…

1 hour ago

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ

ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನ ಹಲವು ಪ್ರದೇಶಗಳಲ್ಲಿ…

2 hours ago