News Karnataka Kannada
Tuesday, May 07 2024
ವಿಶೇಷ

ಇಂದು ಮಹಾತ್ಮ ಗಾಂಧಿ 154ನೇ ಜನ್ಮದಿನಾಚರಣೆ

Mahathmna Gandi (1)
Photo Credit : News Kannada

ದೆಹಲಿ: ಭಾರತದಲ್ಲಿ ಪ್ರತಿ ವರ್ಷವು ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆ ಮಾಡಲಾಗುತ್ತದೆ. ಶಾಲೆ, ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿಯೂ ಸಹ ತಪ್ಪದೇ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನದಂದು ಶಾಲೆಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ನೆನೆದು ಅವರ ಕೊಡುಗೆ, ಅವರ ತತ್ವ ಸಿದ್ಧಾಂತಗಳನ್ನು ನೆನೆದು ಸ್ಮರಿಸಲಾಗುತ್ತದೆ. ಅವರಿಗೆ ವಿಶೇಷ ಗೌರವವನ್ನು ಈ ದಿನಾಂಕದಂದು ಪ್ರತಿ ವರ್ಷ ಸಲ್ಲಿಸಲಾಗುತ್ತದೆ. ಅವರ ಕುರಿತ ಎಲ್ಲ ಐತಿಹಾಸಿಕ ಮಾಹಿತಿಗಳನ್ನು ಸ್ಮರಿಸುವ ದಿನವು ಹೌದು.

ಸ್ವಾತಂತ್ರ್ಯ ಹೋರಾಟವಲ್ಲದೇ ಸಾಮಾಜಿಕ ಕಳಕಳಿಯನ್ನೂ ಗಾಂಧೀಜಿಯವರು ಹೊಂದಿದ್ದರು. ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ತಾರತಮ್ಯ, ಅಸ್ಪೃಶ್ಯತೆ, ಮದ್ಯ ಸೇವನೆಯನ್ನು ವಿರೋಧಿಸಿದರು. ದಲಿತರು, ಮಹಿಳೆಯರಿಗೆ ಗೌರವ ನೀಡಲು ಹೇಳುತ್ತಿದ್ದರು.

ಸ್ವದೇಶಿ ವಸ್ತುಗಳನ್ನು ಪ್ರೀತಿಸಲು ಸಲಹೆ ನೀಡಿದರು. ಇದರಿಂದ ಸ್ಥಳೀಯ ಕೈಗಾರಿಕೆಗಳಿಗೆ ಉತ್ತೇಜನ ಸಿಕ್ಕಿತು. ಸ್ವಾತಂತ್ರ್ಯ ಸಿಕ್ಕ ಆರೇ ತಿಂಗಳಿಗೆ ಅಂದರೆ 1948 ಜನವರಿ 20 ರಂದು ಗಾಂಧೀಜಿ ಹತ್ಯೆಗೀಡಾದರು.

ಇನ್ನು ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ದೆಹಲಿಯ ರಾಜ್ ಘಾಟ್ ನಲ್ಲಿ ಮಹಾತ್ಮಾ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಇದೇ ವೇಳೆ ರಾಜ್‌ಘಾಟ್‌ನಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪಕ್ಷದ ಇತರ ಮುಖಂಡರು ಪುಷ್ಪ ನಮನ ಸಲ್ಲಿಸಿದರು.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು