News Karnataka Kannada
Saturday, May 11 2024
ಸಮುದಾಯ

ಮಂಗಳೂರು: ದೇವಂದಗುಡ್ಡೆ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

Various religious programmes in Devandagudde constituency
Photo Credit : News Kannada

ಮಂಗಳೂರು: ಪುನರ್‌ ನಿರ್ಮಾಣಗೊಳ್ಳುತ್ತಿರುವ ಮಂಗಳೂರು ನಗರದ ಇತಿಹಾಸ ಪ್ರಸಿದ್ಧ ದೇವಂದಗುಡ್ಡೆ, ಮರಕಡ. ಮಹತೋಭಾರ ಶ್ರೀ ಸೋಮನಾಥೇಶ್ವರ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಸೀಯಾಳಾಭಿಷೇಕ, ರುದ್ರಾಭಿಷೇಕ, ಭಜನಾ ಸಂಕೀರ್ತನೆ ನಡೆಯುತ್ತಿದೆ.

ಪುರಾತನವಾಗಿರುವ ಈ ಕ್ಷೇತ್ರವು ಕಾರಣಾಂತರಗಳಿಂದ ನೆಲಸಮವಾಗಿದ್ದು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಊರು, ಪರವೂರಿನ ಭಕ್ತರು, ಆಸ್ತಿಕರ ಸಹಕಾರದಿಂದ ದೇವಳ ಮರುನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಪ್ರಸ್ತುತ ಬಾಲಾಲಯದಲ್ಲಿ ಶಿವನ ಬಿಂಬ ಪ್ರತಿಷ್ಠಾಪನೆ ಮಾಡಿ ಪ್ರತಿ ಸೋಮವಾರಸೀಯಾಳಾಭಿಷೇಕ, ರುದ್ರಾಭಿಷೇಕ ನಡೆಸಲಾಗುತ್ತಿದೆ. ಸೋಮವಾರ ಸಾಯಂಕಾಲ 7ರಿಂದ ಭಜನಾ ಸಂಕೀರ್ತನೆ ನಂತರ ಶಿವಪೂಜೆ, ಮಹಾ ಪೂಜೆ, ಅನ್ನದಾನ ಸೇವೆ ನಡೆಯುತ್ತಿದೆ.

ಈ ನಿಟ್ಟಿನಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಅಗತ್ಯವಾದ ತನು, ಮನ, ಧನ ಸಹಾಯವನ್ನು ಆಡಳಿತ ಮಂಡಳಿ ಯಾಚಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು