ಮಂಗಳೂರು: ಪುನರ್ ನಿರ್ಮಾಣಗೊಳ್ಳುತ್ತಿರುವ ಮಂಗಳೂರು ನಗರದ ಇತಿಹಾಸ ಪ್ರಸಿದ್ಧ ದೇವಂದಗುಡ್ಡೆ, ಮರಕಡ. ಮಹತೋಭಾರ ಶ್ರೀ ಸೋಮನಾಥೇಶ್ವರ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಸೀಯಾಳಾಭಿಷೇಕ, ರುದ್ರಾಭಿಷೇಕ, ಭಜನಾ ಸಂಕೀರ್ತನೆ ನಡೆಯುತ್ತಿದೆ.
ಪುರಾತನವಾಗಿರುವ ಈ ಕ್ಷೇತ್ರವು ಕಾರಣಾಂತರಗಳಿಂದ ನೆಲಸಮವಾಗಿದ್ದು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಊರು, ಪರವೂರಿನ ಭಕ್ತರು, ಆಸ್ತಿಕರ ಸಹಕಾರದಿಂದ ದೇವಳ ಮರುನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಪ್ರಸ್ತುತ ಬಾಲಾಲಯದಲ್ಲಿ ಶಿವನ ಬಿಂಬ ಪ್ರತಿಷ್ಠಾಪನೆ ಮಾಡಿ ಪ್ರತಿ ಸೋಮವಾರಸೀಯಾಳಾಭಿಷೇಕ, ರುದ್ರಾಭಿಷೇಕ ನಡೆಸಲಾಗುತ್ತಿದೆ. ಸೋಮವಾರ ಸಾಯಂಕಾಲ 7ರಿಂದ ಭಜನಾ ಸಂಕೀರ್ತನೆ ನಂತರ ಶಿವಪೂಜೆ, ಮಹಾ ಪೂಜೆ, ಅನ್ನದಾನ ಸೇವೆ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಅಗತ್ಯವಾದ ತನು, ಮನ, ಧನ ಸಹಾಯವನ್ನು ಆಡಳಿತ ಮಂಡಳಿ ಯಾಚಿಸಿದೆ.