ರಾಮನಗರ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದಂತೆ ಎಲ್ಲೆಡೆ ಪಕ್ಷಾಂತರ ಪರ್ವ ಇನ್ನಷ್ಟು ಜೋರಾಗಿದೆ. ಬಿಡದಿ ಭಾಗದಲ್ಲಿಯೂ ಮುಖಂಡರು ಮಾತೃ ಪಕ್ಷ ತೊರೆದು ಬೇರೆ ಪಕ್ಷ ಸೇರುವ ಪ್ರಕ್ರಿಯೆಗಳು ಚುರುಕುಗೊಂಡಿವೆ.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರೂ ಆದ ಮಂಚನಾಯ್ಕನಹಳ್ಳಿ ಗ್ರಾಪಂ ಮಾಜಿ ಸದಸ್ಯ ಎಚ್.ಎಸ್.ಯೋಗಾನಂದ ಹಾಗೂ ಅವರ ಪತ್ನಿ ಬಿಡದಿ ರೈತರ ಸೇವಾ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಅನ್ನಪೂರ್ಣೇಶ್ವರಿ ಅವರುಗಳು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು. ಇದೇ ವೇಳೆ ಹನುಮಂತನಗರದ ಜೆಡಿಎಸ್ ಮುಖಂಡರಾದ ಮಹಾದೇವ, ಮಂಜುನಾಥ್ ಅವರುಗಳು ಪಕ್ಷ ತ್ಯೆಜಿಸಿ ಕಾಂಗ್ರೆಸ್ ಸೇರ್ಪಡೆಯಾದರು. ಇವರನ್ನು ಮುಖಂಡರು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು,ಇಟ್ಟಮ ಗ್ರಾಪಂ ಮಾಜಿ ಅಧ್ಯಕ್ಷ ಬೆಟ್ಟಸ್ವಾಮಿ, ಜಿಪಂ ಮಾಜಿ ಸದಸ್ಯ ಸಿ.ಹೆಚ್.ಪುಟ್ಟಯ್ಯ, ಮುಖಂಡರಾದ ಗಿರಿಧರ್ ರಾಮಯ್ಯ, ಹನುಮಂತೇಗೌಡ, ಮಂಜುನಾತ್ ಮುಂತಾದವರು ಹಾಜರಿದ್ದರು.