ನವದೆಹಲಿ: ಅತಿಯಾದ ಇಯರ್ಫೋನ್ ಬಳಸಿದ ಪರಿಣಾಮ 18 ವರ್ಷದ ಬಾಲಕನ ಶ್ರವಣ ಸಾಮರ್ಥ್ಯ ಕಳೆದುಕೊಂಡ ಘಟನೆಯೊಂದು ನಡೆದಿದೆ. ಆದರೆ ಖಾಸಗಿ ಆಸ್ಪತ್ರೆಯ ವೈದ್ಯರು ಆತನ ಕಿವುಡುತನವನ್ನು ಇದೀಗ ಸರಿಪಡಿಸಿದ್ದಾರೆ.
ಗೋರಖ್ಪುರದ ಪ್ರಿನ್ಸ್, ವಿಪರೀತ ಸಂಗೀತ ಆಸಕ್ತಿ ಹೊಂದಿದ್ದು, ದಿನವಿಡಿ ಸಂಗೀತವನ್ನು ಕೇಳಲು ಇಯರ್ಫೋನ್ಗಳನ್ನು ಬಿಗಿಯಾಗಿ ಅಳವಡಿಸಿಕೊಳ್ಳುತ್ತಿದ್ದರು. ಅಲ್ಲದೆ, ಅವರು ತಮ್ಮ ಇಯರ್ಫೋನ್ಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದರಿಂದ ಹಲವು ವರ್ಷಗಳ ಹಿಂದೆ ಅವರಿಗೆ ಕಿವಿ ನೋವು ಮತ್ತು ಸ್ರವಿಸುವಿಕೆ ಆರಂಭವಾಯಿತು.
ನಂತರ ರೋಗಿಯು ಸ್ಥಳೀಯ ಆಸ್ಪತ್ರೆಯಲ್ಲಿ ಎರಡು ಬಾರಿ ಮಾಸ್ಟಾಯ್ಡ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಆದರೆ ಶಸ್ತ್ರಚಿಕಿತ್ಸೆ ಯುವಕನ ಶ್ರವಣ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರಿತು. ಬಳಿಕ ಪ್ರೈಮಸ್ ಆಸ್ಪತ್ರೆಯ ಇಎನ್ಟಿ ತಜ್ಞ ಡಾ ಅಂಕುಶ್ ಸಯಾಲ್ ಅವರು ಆಸಿಕ್ಯುಲೋಪ್ಲ್ಯಾಸ್ಟಿ, ಮಾಸ್ಟೊಡೆಕ್ಟಮಿ ಮೂಲಕ ಶಸ್ತ್ರಚಿಕಿತ್ಸೆ ಶ್ರವಣ ಸಾಮರ್ಥ್ಯ ಮರುಸ್ಥಾಪಿಸಿದ್ದಾರೆ.