ನವದೆಹಲಿ: ಹೆಚ್ಚಿದ ಆಲ್ಕೋಹಾಲ್ ಸೇವನೆ, ಜಂಕ್ ಫುಡ್, ಅಧಿಕ ಕೊಬ್ಬಿನ ಅಂಶ ಹೊಂದಿದ ಆಹಾರ ಮತ್ತು ಸಕ್ಕರೆ ಪಾನೀಯ ಸೇವನೆಯಿಂದ ಯಕೃತ್ತಿನ ಕಾಯಿಲೆ ಹೆಚ್ಚುತಿದೆ ಎಂದು ವೈದ್ಯರು ಹೇಳಿದ್ದಾರೆ.
ಏಪ್ರಿಲ್ 19 ನ್ನು ವಿಶ್ವ ಯಕೃತ್ತು ದಿನವನ್ನಾಗಿ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯಕೃತ್ತಿನ ಆರೋಗ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ನವದೆಹಲಿಯ ಪ್ರೈಮಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ನ ಹಿರಿಯ ಸಲಹೆಗಾರ ಡಾ. ಅಭಯ್ ಸಿಂಗ್ ಹೇಳಿದ್ದಾರೆ.
“ಭಾರತದಲ್ಲಿ, ಯಕೃತ್ತಿಗೆ ಸಂಬಂಧಿಸಿದ ಪ್ರತಿ ವರ್ಷ 268,580 ಸಾವು ಸಂಭವಿಸುತ್ತದೆ. “ನನ್ನ ಆಸ್ಪತ್ರೆಯ ಹೊರರೋಗಿ ವಿಭಾಗದ ಸುಮಾರು 30-40 ಪ್ರತಿಶತದಷ್ಟು ರೋಗಿಗಳು ಯಕೃತ್ತಿನ ಸಮಸ್ಯೆ ಹೊಂದಿದ್ದಾರೆ ಎಂದು ಡಾ. ಸಿಂಗ್ ಹೇಳಿದ್ದಾರೆ. “ಈ ಕಾಯಿಲೆಗಳು ಜಂಕ್ ಫುಡ್, ಹೆಚ್ಚಿನ ಕೊಬ್ಬಿನ ಆಹಾರ ಮತ್ತು ಸಕ್ಕರೆ ಅಂಶ ಹೊಂದಿದ ಪಾನೀಯಗಳ ಸೇವನೆಯಿಂದ ಉಂಟಾಗುತ್ತದೆ ಎಂದು ಅವರು ತಿಳಿಸಿದ್ದಾರೆ.