ಧಾರವಾಡ: ಮಕ್ಕಳಿರಬೇಕು ಮನೆ ತುಂಬ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅದರಂತೆ ಮನೆ ತುಂಬ ಓಡಾಡಿಕೊಂಡಿರುವ ಮಕ್ಕಳು ಅದರಷ್ಟೇ ಆರೋಗ್ಯವಾಗಿರಬೇಕಾಗಿದ್ದು ಕೂಡ ಮುಖ್ಯ ಎಂದು ಎಸ್ಡಿಎಮ್ ನಾರಾಯಣ ಹೃದಯಾಲಯದ ಡಾ. ಅರುಣ್ ಬಬಲೇಶ್ವರ ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಜನಿಸುತ್ತಿರುವ ಪ್ರತಿ ನೂರು ಮಕ್ಕಳಲ್ಲಿ ಒಂದು ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇರುತ್ತದೆ ಎಂಬುದು ಸಮೀಕ್ಷೆ ಪ್ರಕಾರ ಇರುವ ಮಾಹಿತಿ ಇಂತಹ ಸಮಸ್ಯೆ ಇರುವ ಮಕ್ಕಳನ್ನು ತಡ ಮಾಡದೇ ವೈದ್ಯರ ಬಳಿ ಕರೆತರಬೇಕು. ಮಕ್ಕಳಲ್ಲಿ ಕಂಡು ಬರುವ ಹೃದಯ ಸಂಬಂಧಿ ಕಾಯಿಲೆಗಳಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದು ತೀರಾ ಅವಶ್ಯಕ ಎನ್ನುತ್ತಾರೆ ಡಾ. ಅರುಣ್.