ಉತ್ತರ ಪ್ರದೇಶ: ಗಾಜಿಯಾಬಾದ್ನ ಪ್ರೇಮ್ ನಗರ ಕಾಲೋನಿಯಲ್ಲಿ ಫ್ರೈಡ್ ಚಿಕನ್ಗೆ ಹಣ ನೀಡಲಿಲ್ಲ ಎಂದು ಪತ್ನಿಯನ್ನೇ ಪತಿ ಕೊಂದಿರುವ ಭೀಕರ ಘಟನೆಯೊಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪತಿ ಹುಸೇನ್ನನ್ನು ಈಗಾಗಲೇ ಬಂಧಿಸಿರುವುದಾಗಿ ಎಸಿಪಿ ಸಿದ್ಧಾರ್ಥ್ ಗೌತಮ್ ಖಚಿತಪಡಿಸಿದ್ದಾರೆ. ಶುಕ್ರವಾರ ರಾತ್ರಿ ಪತ್ನಿ ನೂರ್ ಬಾನೊ(46) ಮತ್ತು ಪತಿ ಶಾಹಿದ್ ಹುಸೇನ್ ಇಬ್ಬರು ಮನೆಗೆ ಬೇಕಾಗುವ ಸಾಮಾಗ್ರಿ ತರಲು ಹೊರಗಡೆ ಹೋಗಿದ್ದಾರೆ.
ಈ ವೇಳೆ ಪತಿ ಹುಸೇನ್ ಫ್ರೈಡ್ ಚಿಕನ್ ಖರೀದಿಸಲು ಮುಂದಾಗಿದ್ದಾನೆ. ಆದರೆ ಪತ್ನಿ ಚಿಕನ್ ಖರೀದಿಸಲು ಹಣ ನೀಡದಿದ್ದಾಗ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಜಗಳದ ವೇಳೆ ಹುಸೇನ್ ಪತ್ನಿಯ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ. ನೂರ್ ಬಾನೊಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.