ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣವತ್ ಗೆ ಕೇಂದ್ರ ಸರ್ಕಾರ `ವೈ’ ದರ್ಜೆಯ ಭದ್ರತೆಯನ್ನು ನೀಡಿದೆ.
ರಣವತ್ ಇತ್ತೀಚಿನ ದಿನಗಳಲ್ಲಿ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ, ಶಿವಸೇನೆ ಮತ್ತು ಮುಂಬಯಿ ಪೊಲೀಸರ ವಿರುದ್ಧ ಹರಿಹಾಯ್ದಿದ್ದರು. ಕಂಗನಾಗೆ ಮುಂಬಯಿಗೆ ಬರಲು ಬಿಡುವುದಿಲ್ಲವೆಂದು ಶಿವಸೇನಾ ಸಂಸದ ಸಂಜಯ್ ರಾವುತ್ ಬೆದರಿಕೆ ಕೂಡ ಹಾಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ ನಾನು ಮುಂಬಯಿಗೆ ಬಂದೇ ಬರುತ್ತೇನೆ. ಸಾಧ್ಯವಿದ್ದರೆ ತಡೆಯಿರಿ ಎಂದು ಸವಾಲು ಹಾಕಿದ್ದರು. ಕೆಲವು ಸಂಘಟನೆಗಳು ಕಂಗನಾಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಂಗನಾಗೆ ವೈ ದರ್ಜೆ ಭದ್ರತೆ ಒದಗಿಸಲು ಪೊಲೀಸರಿಗೆ ಸೂಚನೆ ನೀಡಿದೆ.