ಮಂಗಳೂರು: ಅಗೋಸ್ಟ್ 15, 2022 ರಂದು ಮಂಗಳೂರು ಮಿಲಾಗ್ರಿಸ್ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸೈನಿಕ ಶ್ರೀಯುತ ಅಲ್ಫೋನ್ಸ್ ಡಿಸೋಜಾ ಧ್ವಜಾರೋಹಣವನ್ನು ನೆರವೇರಿಸಿದರು.
ಇವರು ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ ಮಹಾನ್ ಹುತಾತ್ಮರ ಪರಮ ತ್ಯಾಗದ ಬಗ್ಗೆ
ಹೇಳುವ ಮೂಲಕ ಸ್ವಾತಂತ್ರ್ಯವು ತುಂಬಾ ಅಮೂಲ್ಯವಾದದು, ಅದನ್ನು ಸಂರಕ್ಷಿಸುವುದು ಬಹಳ ಅಗತ್ಯ ಎಂದು ಹೇಳಿದರು.
ಮಿಲಾಗ್ರಿಸ್ ಕಾಲೇಜಿನ ಸಂಚಾಲಕರಾದ ವಂ. ಗು. ಬೊನವೆಂಚರ್ ನಜರೆತ್ ಅವರು ಅಧ್ಯಕ್ಷೀಯ ಭಾಷಣದಲ್ಲಿ ಸ್ವಾತಂತ್ರ÷್ಯ ಹೋರಾಟಗಾರರ ಮಹಾನ್ ಆದರ್ಶ, ಮೌಲ್ಯ, ಹಾಗೂ ತ್ಯಾಗಗಳ ಬಗ್ಗೆ ತಿಳಿ ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ. ಗು. ಮೈಕಲ್ ಸಾಂತುಮಾಯೋರ್, ಸೆಂಟ್ರಲ್ ಸ್ಕೂಲ್ನ ಪ್ರಾಂಶುಪಾಲರಾದ ವಂ. ಗು. ಉದಯ ಫೆರ್ನಾಂಡಿಸ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಮೆಲ್ವಿನ್ ವಾಸ್ ಉಪಸ್ಥಿತರಿದ್ದರು.
ವಂ. ಗು. ಮೈಕಲ್ ಸಾಂತುಮಾಯೋರ್ ಸ್ವಾಗತಿಸಿ, ಶ್ರೀ ಸ್ಟಾನಿ ಬಾರೆಟ್ಟೊ ವಂದಿಸಿದರು. ವಿದ್ಯಾರ್ಥಿ ಜೋಸ್ಟನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಈ ಪ್ರಯುಕ್ತ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮಿಲಾಗ್ರಿಸ್ ವಠಾರದ ಸುತ್ತಮುತ್ತ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು.