ಶಿವಮೊಗ್ಗ: ವಿದ್ಯಾರ್ಥಿಗಳು ಗಳಿಸಿದ ಜ್ಞಾನ ಸಮಾಜದ ಆಸ್ತಿ. ನಿಜವಾದ ಶಿಕ್ಷಣ ನಾಲ್ಕು ಗೋಡೆಗಳ ಹೊರಗೆ ಎನ್.ಎಸ್.ಎಸ್.ನಿಂದ ದೊರೆಯುತ್ತದೆ ಎಂದು ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ ಹೇಳಿದರು. ಅವರು ತಾಲೂಕಿನ ದೊಡ್ಡದಾನವಂದಿಯಲ್ಲಿ ಕಮಲಾ ನೆಹರು ಮಹಿಳಾ ಕಾಲೇಜಿನ ರಾ.ಸೇ.ಯೋ.ಘಟಕವು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಅಮೃತ ಸಮುದಾಯ ಅಭಿವೃತದ್ಧಿ ಯೋಜನೆಯಡಿಯಲ್ಲಿ ಆಯೋಜಿಸಿರುವ ಒಂದು ವಾರ ಕಾಲದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶೇಷ ಶಿಬಿರಗಳಲ್ಲಿ ಪರಿಸರ, ವ್ಯಕ್ತಿಗಳ ಜೊತೆ ಹೊಂದಿಕೊಳ್ಳುವ ಸ್ವಭಾವ ನಮಗೆ ಗೊತ್ತಿಲ್ಲದೇ ಬರುತ್ತದೆ ಎಂದ ಅವರು ಏನು ಬೇಕಾದರೂ ಆಗಬಹುದು.
ಆದರೆ ಏನಾಗಬೇಕು ಎಂಬುದನ್ನು ನಾವು ನಿರ್ಧರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸ್ವಾತಂತ್ರ್ಯದ ಹೋರಾಟದ ಸಚಿದರ್ಭದಲ್ಲಿ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಮಾನಸಿಕ ವಿಕಸನವೂ ಇತ್ತು ಎಂದು ಮೆಲುಕು ಹಾಕಿದ ಅವರು 1975ರಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಲಾಯಿತು ಎಚಿದು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಂಡರು. ಮಹಿಳೆ ಅವಕಾಶ ನೀಡಿದರೆ ಆಳಿ ತೋರಿಸುತ್ತೇನ ಅಂತ ರೋರಿಸಿಕೊಟ್ಟಿದ್ದಾಳೆ. ಆ
ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಧಕರ ಆತ್ಮ ಚರಿತ್ರೆ ಯನ್ನು ಓದಬೇಕು ಎಂದು ಕಿವಿ ಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಮೊಬೈಲಿನಲ್ಲಿ ಮುಳುಗಿದ್ದು, ಮೊಬೈಲ್ ಕರೆನ್ಸಿಯನ್ನು ಶೈಕ್ಷಣಿಕ ಉಪಯೋಗಕ್ಕೆ ಉಪಯೋಗಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ಕೋಹಳ್ಳಿ ಗ್ರಾಮ ಪಂ.ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಬಿ., ಮಾ ಜಿ ಅಧ್ಯಕ್ಷೆ ನಾಗರತ್ಮಮ್ಮ ಪ್ರಕಾಶ್, ಡಾ.ಪರಿಸರ ನಾಗರಾಜ, ಡಾ.ಓಂಕಾರಪ್ಪ ಎ.ಪಿ. ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ, ದೀಪಿಕಾ ಪಿ. ಮೊದಲಾದವರು ಉಪಸ್ಥಿತರಿದ್ದರು. ಕು.ಸತ್ಯವತಿ ಸ್ವಾಗತಿಸಿದರು. ನಯನಾ ನಿರೂಪಿಸದರು. ನಾಗವೇಣಿ ವಂದಿಸಿದರು.