News Karnataka Kannada
Monday, May 06 2024
ಕ್ಯಾಂಪಸ್

ಮೊಬೈಲ್ ಕರೆನ್ಸಿ ಶಿಕ್ಷಣಕ್ಕೆ ಬಳಕೆಯಾಗಲಿ: ಆಯನೂರು ಮಂಜುನಾಥ

Shimogga College
Photo Credit : News Kannada

ಶಿವಮೊಗ್ಗ: ವಿದ್ಯಾರ್ಥಿಗಳು ಗಳಿಸಿದ ಜ್ಞಾನ ಸಮಾಜದ ಆಸ್ತಿ. ನಿಜವಾದ ಶಿಕ್ಷಣ ನಾಲ್ಕು ಗೋಡೆಗಳ ಹೊರಗೆ ಎನ್.ಎಸ್.ಎಸ್.ನಿಂದ ದೊರೆಯುತ್ತದೆ ಎಂದು ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ ಹೇಳಿದರು. ಅವರು ತಾಲೂಕಿನ ದೊಡ್ಡದಾನವಂದಿಯಲ್ಲಿ ಕಮಲಾ ನೆಹರು ಮಹಿಳಾ ಕಾಲೇಜಿನ ರಾ.ಸೇ.ಯೋ.ಘಟಕವು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಅಮೃತ ಸಮುದಾಯ ಅಭಿವೃತದ್ಧಿ ಯೋಜನೆಯಡಿಯಲ್ಲಿ ಆಯೋಜಿಸಿರುವ ಒಂದು ವಾರ ಕಾಲದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿಶೇಷ ಶಿಬಿರಗಳಲ್ಲಿ ಪರಿಸರ, ವ್ಯಕ್ತಿಗಳ ಜೊತೆ ಹೊಂದಿಕೊಳ್ಳುವ ಸ್ವಭಾವ ನಮಗೆ ಗೊತ್ತಿಲ್ಲದೇ ಬರುತ್ತದೆ ಎಂದ ಅವರು ಏನು ಬೇಕಾದರೂ ಆಗಬಹುದು.
ಆದರೆ ಏನಾಗಬೇಕು ಎಂಬುದನ್ನು ನಾವು ನಿರ್ಧರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸ್ವಾತಂತ್ರ್ಯದ ಹೋರಾಟದ ಸಚಿದರ್ಭದಲ್ಲಿ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಮಾನಸಿಕ ವಿಕಸನವೂ ಇತ್ತು ಎಂದು ಮೆಲುಕು ಹಾಕಿದ ಅವರು 1975ರಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಲಾಯಿತು ಎಚಿದು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಂಡರು. ಮಹಿಳೆ ಅವಕಾಶ ನೀಡಿದರೆ ಆಳಿ ತೋರಿಸುತ್ತೇನ ಅಂತ ರೋರಿಸಿಕೊಟ್ಟಿದ್ದಾಳೆ. ಆ
ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಧಕರ ಆತ್ಮ ಚರಿತ್ರೆ ಯನ್ನು ಓದಬೇಕು ಎಂದು ಕಿವಿ ಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಮೊಬೈಲಿನಲ್ಲಿ ಮುಳುಗಿದ್ದು, ಮೊಬೈಲ್ ಕರೆನ್ಸಿಯನ್ನು ಶೈಕ್ಷಣಿಕ ಉಪಯೋಗಕ್ಕೆ ಉಪಯೋಗಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ಕೋಹಳ್ಳಿ ಗ್ರಾಮ ಪಂ.ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಬಿ., ಮಾ ಜಿ ಅಧ್ಯಕ್ಷೆ ನಾಗರತ್ಮಮ್ಮ ಪ್ರಕಾಶ್, ಡಾ.ಪರಿಸರ ನಾಗರಾಜ, ಡಾ.ಓಂಕಾರಪ್ಪ ಎ.ಪಿ. ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ, ದೀಪಿಕಾ ಪಿ. ಮೊದಲಾದವರು ಉಪಸ್ಥಿತರಿದ್ದರು. ಕು.ಸತ್ಯವತಿ ಸ್ವಾಗತಿಸಿದರು. ನಯನಾ ನಿರೂಪಿಸದರು. ನಾಗವೇಣಿ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು