ಚಿಕ್ಕಮಗಳೂರು : ಪ್ರತಿದಿನ ಜಾನುವಾರುಗಳಿಗೆ 6 ಕೆ.ಜಿ ಒಣಮೇವಿನ ಅವಶ್ಯಕತೆ ಇದೆ ಆದರೆ ಸರಕಾರ ಹಸಿರು ಮೇವಿನ ಬೀಜ ನೀಡಿದ್ದೇವೆ ಎಂದು ಹೇಳಿ ಸಮರ್ಪಕವಾಗಿ ಅನುಷ್ಠಾನ ಮಾಡದೆ ಸುಮ್ಮನಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ರೈತಮೋರ್ಚಾದ ಜಿಲ್ಲಾಧ್ಯಕ್ಷರಾದ ಶಂಬೈನರ್ ಆನಂದಪ್ಪ ಆರೋಪ ಮಾಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿ ರಾಜ್ಯದಲ್ಲಿ 1.15 ಕೋಟಿ ರೂ. ಜಾನುವಾರುಗಳು ಹಾಗೂ 72 ಲಕ್ಷ ಚಿಕ್ಕ ಜಾನುವಾರುಗಳಿವೆ. ಇವುಗಳ ಸಂರಕ್ಷಣೆ ಮಾಡುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ.
2023 ಮತ್ತು 24ರಲ್ಲಿ ರಾಜ್ಯದಲ್ಲಿ 196 ತಾಲೂಕುಗಳು ತೀವ್ರ ಬರಕ್ಕೆ ಒಳಗಾಗಿದ್ದು ತಾಲೂಕು ಸಾಧಾರಣ ಬರಕ್ಕೆ ಒಳಗಾಗಿವೆ. ಗೋಮಳ ಕೆರೆನದಿ ಪಾತ್ರದ ಜಾನುವಾರುಗಳಿಗೆ ಹಸಿರು ಮೇವು ಬೆಳೆಯಲು ಅವಕಾಶ ಮಾಡಲು ವಿಫಲವಾಗಿದೆ.
ಜಾನುವಾರುಗಳ ಆರೋಗ್ಯ ರಕ್ಷಣೆಗೆ ಆರೋಗ್ಯತಪಾಸಣೆಗೆ ಶಿಬಿರ ಆಯೋಜನೆ ಮಾಡಿಲ್ಲ. ತಕ್ಷಣ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಜಾನುವಾರುಗಳ ರಕ್ಷಣೆಗೆ ನಿಲ್ಲದಿದ್ದರೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡಲಾಗುತ್ತದೆ ಎಂದರು.